For the best experience, open
https://m.newskannada.com
on your mobile browser.
Advertisement

ಅಡ್ಯಾರ್‌ ನಲ್ಲಿ ಭೀಕರ ಅಪಘಾತ : ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿ ಸಾವು

ನಗರದ ಅಡ್ಯಾರ್‌ನಲ್ಲಿ ಭೀಕರ ಅಪಘಾತ ಸಂಭವಿಸಿದ್ದು ಸಹ್ಯಾದ್ರಿ ಇಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ. ಈ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಅಡ್ಯಾರ್‌ ನಲ್ಲಿ ಸಂಭವಿಸಿದೆ.ಸಾವಿಯೊ ಮಹೇಶ್‌(21)
02:44 PM Apr 17, 2024 IST | Nisarga K
ಅಡ್ಯಾರ್‌ ನಲ್ಲಿ ಭೀಕರ ಅಪಘಾತ   ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿ ಸಾವು
ಅಡ್ಯಾರ್‌ ನಲ್ಲಿ ಭೀಕರ ಅಪಘಾತ : ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿ ಸಾವು

ಮಂಗಳೂರು: ನಗರದ ಅಡ್ಯಾರ್‌ನಲ್ಲಿ ಭೀಕರ ಅಪಘಾತ ಸಂಭವಿಸಿದ್ದು ಸಹ್ಯಾದ್ರಿ ಇಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ. ಈ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಅಡ್ಯಾರ್‌ ನಲ್ಲಿ ಸಂಭವಿಸಿದೆ.ಸಾವಿಯೊ ಮಹೇಶ್‌(21)

Advertisement

ಬೆಳ್ತಂಗಡಿ ಮೂಲದ, ಅಡ್ಯಾರ್‌ ಸಹ್ಯಾದ್ರಿ ಇಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿ ಸಾವಿಯೊ ಮಹೇಶ್‌(21) ಮೃತಪಟ್ಟಿದ್ದು ಅವರ ಜೊತೆಗಿದ್ದ ಇನ್ನೋರ್ವ ಸವಾರ ಲಾಯ್ಲ ನಿವಾಸಿ ಪ್ರಣಮ್‌ ಶೆಟ್ಟಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರೆ. ಸಹ್ಯಾದ್ರಿ ಹಾಸ್ಟೆಲ್‌ನಲ್ಲಿದ್ದುಕೊಂಡು ಓದುತ್ತಿದ್ದರು.

ಸೋಮವಾರ ಸಂಜೆ ರಾತ್ರಿ 9 ಗಂಟೆಗೆ ಅಡ್ಯಾರಿನ ಸಹ್ಯಾದ್ರಿ ಕಾಲೇಜಿನ ಎದುರಿನ ರಸ್ತೆಯಿಂದ ಗೇಟಿನಿಂದ ತಿರುವಿನಲ್ಲಿ ಬಿ.ಸಿ ರೋಡ್‌ ಮಾರ್ಗವಾಗಿ ಬರುತ್ತಿದ್ದ ಆಡಿ ಕಾರು ವೇಗವಾಗಿ ಬಂದು ಬೈಕ್‌ಗೆ ಡುಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಮಹೇಶ್‌ ಅವರ ಮುಖ ಮತ್ತು ತಲೆಯ ಹಿಂಭಾಗಕ್ಕೆ ತೀವ್ರ ಗಾಯಗೊಂಡಿದ್ದು ಅವರನ್ನು ಕೂಡಲೇ ವೆನ್ಲಾಕ್‌ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ದಾರಿಯ ಮಧ್ಯದಲ್ಲೇ ಅವರು ಸಾವನಪ್ಪಿದ್ದರು. ಇನ್ನು ಗಾಯಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಕಾರು ಚಾಲಕನ ವಿರುದ್ದ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Advertisement

Advertisement
Tags :
Advertisement