For the best experience, open
https://m.newskannada.com
on your mobile browser.
Advertisement

ಮೋಟಾರ್ ಇದ್ದ ಕಬ್ಬಿನ ಹಾಲಿನ ಗಾಡಿ ಕಳವು ಮಾಡಿದ್ದ ಆರೋಪಿಗಳ ಬಂಧನ

ಬೀದಿ ಬದಿ ನಿಲುಗಡೆ ಮಾಡಿದ್ದ ಮೋಟಾರ್ ಇದ್ದ ಕಬ್ಬಿನ ಹಾಲಿನ ಗಾಡಿಯನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
02:38 PM Mar 17, 2024 IST | Ashika S
ಮೋಟಾರ್ ಇದ್ದ ಕಬ್ಬಿನ ಹಾಲಿನ ಗಾಡಿ ಕಳವು ಮಾಡಿದ್ದ ಆರೋಪಿಗಳ ಬಂಧನ

ಬೆಂಗಳೂರು: ಬೀದಿ ಬದಿ ನಿಲುಗಡೆ ಮಾಡಿದ್ದ ಮೋಟಾರ್ ಇದ್ದ ಕಬ್ಬಿನ ಹಾಲಿನ ಗಾಡಿಯನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಅಂಜನಾಪುರದ ಆವಲಹಳ್ಳಿ ನಿವಾಸಿ ವಿಜಯ್ ಕುಮಾರ್ ಅಲಿಯಾಸ್ ವಿಜಿ (29) ಮತ್ತು ಆವಲಹಳ್ಳಿಯ ಅಯೂಬ್ ಲೇ ಔಟ್ ನಿವಾಸಿ ಮನ್ಸೂರ್ ಪಾಷಾ ಅಲಿಯಾಸ್ ಮನ್ಸೂರ್ (27) ಬಂಧಿತ ಆರೋಪಿಗಳು.

ಘಟನೆ: ಮಾ.1 ರಂದು ಅಂಜನಾಪುರದ ಬೀದಿ ಸೈಯದ್ ನಫೀಜ್ ಎಂಬುವವರು ನಿಲ್ಲಿಸಿದ್ದ ಮೋಟಾರು ಇದ್ದ ಕಬ್ಬಿನ ಹಾಲಿನ ಗಾಡಿ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

ಆರೋಪಿಗಳಿಂದ ರೂ.1 ಲಕ್ಷ ಮೌಲ್ಯದ ಮೋಟಾರು ಇದ್ದ ಕಬ್ಬಿನ ಹಾಲಿನ ಗಾಡಿಯನ್ನು ವಶಕ್ಕೆ ಪಡೆಯಲಾಗಿದೆ.

Advertisement
Tags :
Advertisement