ಪ್ರೇಮಿಗಳನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದವ ಅಂದರ್
ಪಾರ್ಕ್ ಸೇರಿದಂತೆ ವಿವಿಧ ಸ್ಥಳಗಳಿಗೆ ಬರುವ ಪ್ರೇಮಿಗಳು, ದಂಪತಿಗಳನ್ನು ಹಿಂಬಾಲಿಸಿ ಸುಲಿಗೆ ಮಾಡುತ್ತಿದ್ದ ಖತರ್ನಾಕ್ ಆರೋಪಿಯನ್ನು ನಗರದ ಹೆಚ್ಎಸ್ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
08:52 AM Dec 27, 2023 IST
|
Ashika S
ಬೆಂಗಳೂರು: ಪಾರ್ಕ್ ಸೇರಿದಂತೆ ವಿವಿಧ ಸ್ಥಳಗಳಿಗೆ ಬರುವ ಪ್ರೇಮಿಗಳು, ದಂಪತಿಗಳನ್ನು ಹಿಂಬಾಲಿಸಿ ಸುಲಿಗೆ ಮಾಡುತ್ತಿದ್ದ ಖತರ್ನಾಕ್ ಆರೋಪಿಯನ್ನು ನಗರದ ಹೆಚ್ಎಸ್ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
Advertisement
ಗಣೇಶ್ ಬಂಧಿತ ಆರೋಪಿ.
ಪ್ರೇಮಿಗಳು ಮತ್ತು ದಂಪತಿಗಳನ್ನ ಹಿಂಬಾಲಿಸಿ ಮೊಬೈಲ್, ಹಣ, ಚಿನ್ನ ದೋಚುತ್ತಿದ್ದ. ಆರೋಪಿ ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಮೊಬೈಲ್ ಜಪ್ತಿ ಮಾಡಲಾಗಿದೆ. ಕಳೆದ ಡಿ.17ರಂದು ಎಚ್ ಎಸ್ ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Advertisement
ನಾಲ್ಕೈದು ವರ್ಷದ ಹಿಂದೆ ಪೊಲೀಸರಿಗೆ ಪಂಚನಾಮೆಗೆ ಸಹಕರಿಸಿದ್ದ. ಪೊಲೀಸರು ದಾಳಿ ಮಾಡುವ ಸ್ಟೈಲ್ನ್ನು ಗಣೇಶ್ ಗಮನಿಸಿದ್ದ. ಹಲವು ಪ್ರಕರಣದಲ್ಲಿ ನಕಲಿ ಪೊಲೀಸ್ ಸೋಗಿನಲ್ಲಿ ಹೋಗುತ್ತಿದ್ದ. ಪ್ರೇಮಿಗಳು, ದಂಪತಿಯನ್ನೇ ಟಾರ್ಗೆಟ್ ಮಾಡುತ್ತಿದ್ದ. ಪಾರ್ಕ್ಗಳ ಬಳಿ ಜೋಡಿಗಳ ಹಿಂದೆ ಹೋಗಿ ಬೆದರಿಸುತ್ತಿದ್ದ. ಮಾರಕಾಸ್ತ್ರ ತೋರಿಸಿ ಅವರಿಂದ ಮೊಬೈಲ್, ಹಣ, ಚಿನ್ನ ಕದಿಯುತ್ತಿದ್ದ.
Advertisement
Next Article