ಕರಾವಳಿಗೆ ಎಂಟ್ರಿ ನೀಡಿದ ಅಣ್ಣಮಲೈ: ಬ್ರಿಜೇಶ್ ಚೌಟ ಪರ ಮತಯಾಚನೆ
ದ ಕ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಪರ ಮತ ಯಾಚಿಸಲು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಮಲೈ ಅವರು ಇಂದು ಕಡಬ ತಾಲೂಕಿನ ಬಿಳಿನೆಲೆಗೆ ಬಂದಿಳಿದ್ದಿದ್ದಾರೆ.
12:32 PM Apr 23, 2024 IST | Ashika S
ಮಂಗಳೂರು: ದ ಕ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಪರ ಮತ ಯಾಚಿಸಲು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಮಲೈ ಅವರು ಇಂದು ಕಡಬ ತಾಲೂಕಿನ ಬಿಳಿನೆಲೆಗೆ ಬಂದಿಳಿದ್ದಿದ್ದಾರೆ.
Advertisement
ಅವರನ್ನು ಬಿಜೆಪಿ ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತೆ ಹಲವು ಬಿಜೆಪಿ ಮುಖಂಡರು ಕಾರ್ಯಕರ್ತರು ಸ್ವಾಗತಿಸಿದರು. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಮಲೈ ಅವರು ಕರಾವಳಿಯಲ್ಲಿ ರೋಡ್ ಶೋ ನಡೆಸಲಿದ್ದಾರೆ.
ಕಡಬ ಮತ್ತು ಪುತ್ತೂರಿನಲ್ಲಿ ರೋಡ್ ಶೋ ನಡೆಸಲಿರುವ ಅಣ್ಣಮಲೈ ಅವರು ಬಳಿಕ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಪರ ಮಂಗಳೂರು ಹೊರವಲಯದ ತುಂಬೆಯಲ್ಲಿಯೂ ರೋಡ್ ಶೋ ನಡೆಸಲಿದ್ದಾರೆ.
Advertisement
Advertisement