For the best experience, open
https://m.newskannada.com
on your mobile browser.
Advertisement

ತಂದೆಯೇ ಮಗುವನ್ನು ಗೋಡೆಗೆ ಎಸೆದಿದ್ದ ಪ್ರಕರಣ - ಚಿಕಿತ್ಸೆ ಫಲಿಸದೇ ಮಗು ಸಾವು

ಅಳುತ್ತದೆ ಎಂದು ಮಗುವನ್ನು ಗೋಡೆಗೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಫಲಿಸದೆ ಮಗು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ.
10:01 PM Feb 29, 2024 IST | Gayathri SG
ತಂದೆಯೇ ಮಗುವನ್ನು ಗೋಡೆಗೆ ಎಸೆದಿದ್ದ ಪ್ರಕರಣ   ಚಿಕಿತ್ಸೆ ಫಲಿಸದೇ ಮಗು ಸಾವು

ಹುಬ್ಬಳ್ಳಿ: ಅಳುತ್ತದೆ ಎಂದು ಮಗುವನ್ನು ಗೋಡೆಗೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಫಲಿಸದೆ ಮಗು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ.

Advertisement

ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ ನಡೆದಿದ್ದ ಘಟನೆ ಇದಾಗಿದೆ. ಮಗು ಅಳುತ್ತಿದ್ದರಿಂದ ನಿದ್ದೆಗೆ ಭಂಗ ಬರುತ್ತಿದೆ ಅಂತ ಪಾಪಿ ತಂದೆ ಶಂಭುಲಿಂಗಯ್ಯ ಶಾಪುರಮಠ ಕೋಪಗೊಂಡಿದ್ದ. ಬಳಿಕ ಒಂದು ವರ್ಷದ ಶ್ರೇಯಾ ಎಂಬುವ ಮಗುವನ್ನು ಗೋಡೆಗೆ ಎಸಿದಿದ್ದ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ.

ಮಗುವಿನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಪಾಪಿ ತಂದೆಗೆ ಕಠಿಣ ಶಿಕ್ಷೆ ವಿಧಿಸುವಂತೆ ಪತ್ನಿಯ ಕುಟುಂಬಸ್ಥರು ಆಗ್ರಹಿಸಿದ್ದಾರೆ.

Advertisement

Advertisement
Tags :
Advertisement