ದ.ಕನ್ನಡದಲ್ಲಿ ಹಿಂದುತ್ವದ ಭದ್ರಕೋಟೆ ಮುರಿದು ಬೀಳುತ್ತೆ: ಬಿ.ಕೆ.ಹರಿಪ್ರಸಾದ್
ದ.ಕನ್ನಡದಲ್ಲಿ ಈ ಬಾರಿ ಹಿಂದುತ್ವದ ಭದ್ರಕೋಟೆ ಮುರಿದು ಬೀಳುತ್ತೆ ಎಂದು ಮಂಗಳೂರಿನಲ್ಲಿ ಇಂದು ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ.
03:36 PM Apr 03, 2024 IST | Nisarga K
ಮಂಗಳೂರು: ದ.ಕನ್ನಡದಲ್ಲಿ ಈ ಬಾರಿ ಹಿಂದುತ್ವದ ಭದ್ರಕೋಟೆ ಮುರಿದು ಬೀಳುತ್ತೆ ಎಂದು ಮಂಗಳೂರಿನಲ್ಲಿ ಇಂದು ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ.
Advertisement
ನಗರದಲ್ಲಿಂದು ಮಾತನಾಡಿದಸ ಅವರು ಮಹಾರಾಷ್ಟ್ರದಲ್ಲಿ ಸಾವರ್ಕರ್ ಸೃಷ್ಟಿ ಮಾಡಿದ ಭದ್ರಕೋಟೆಯೇ ಭದ್ರವಾಗಿಲ್ಲ. ಎಲ್ಲರನ್ನೂ ಖರೀದಿ ಮಾಡಿ ಹಿಂದುತ್ವದ ಕೋಟೆ ಮಾಡೋದಕ್ಕೆ ಆಗೋದಿಲ್ಲ. ಬಿಜೆಪಿ ಇಲ್ಲಿ ಗೆದ್ದಿರೋದು ಹಿಂದುತ್ವದ ಕೋಟೆಯಿಂದ ಅಂತ ಹೇಳೋದಿಕ್ಕೆ ಆಗೋದಿಲ್ಲ. ದೊಡ್ಡ ದೊಡ್ಡ ಕೋಟೆಗಳೇ ಮುರಿದು ಬಿದ್ದಿದೆ, ರಾಜ ಮಹಾರಾಜರ ಕೋಟೆಗಳೇ ಪಾಳುಬಿದ್ದಿದೆ. ಅದೇ ರೀತಿ ದಕ್ಷಿಣ ಕನ್ನಡದಲ್ಲಿ ಈ ಬಾರಿ ಹಿಂದುತ್ವದ ಭದ್ರಕೋಟೆ ಮುರಿದು ಬೀಳುತ್ತೆ ಎಂದಿದ್ದಾರೆ.
Advertisement
Advertisement