ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಅನ್ಯಕೋಮಿನ ಹುಡುಗನ ಜೊತೆ ತಂಗಿಯ ಲವ್: ತಾಯಿ, ತಂಗಿಯನ್ನ ಕೆರೆಗೆ ತಳ್ಳಿ ಕೊಲೆಗೈದ ಅಣ್ಣ

ಅನ್ಯಕೋಮಿನ ಹುಡುಗನನ್ನು ಪ್ರೀತಿಸಿದಕ್ಕಾಗಿ ತನ್ನ ತಂಗಿಯ ಜೊತೆಗೆ ತಾಯಿಯನ್ನು ಕೂಡ ಕೆರೆಗೆ ತಳ್ಳಿ ಕೊಲೆಗೈದಿರುವ ದುರಂತ ಘಟನೆ ಹುಣಸೂರು ತಾ|ಮರೂರು ಗ್ರಾಮದಲ್ಲಿ ನಡೆದಿದೆ.
11:07 AM Jan 24, 2024 IST | Ashitha S
ಅನ್ಯಕೋಮಿನ ಹುಡುಗನನ್ನ ಪ್ರೀತಿಸಿದ್ದ ತಂಗಿ: ತಾಯಿ, ತಂಗಿಯನ್ನ ಕೆರೆಗೆ ತಳ್ಳಿ ಕೊಲೆಗೈದ ಅಣ್ಣ

ಹುಣಸೂರು: ಅನ್ಯಕೋಮಿನ ಹುಡುಗನನ್ನು ಪ್ರೀತಿಸಿದಕ್ಕಾಗಿ ತನ್ನ ತಂಗಿಯ ಜೊತೆಗೆ ತಾಯಿಯನ್ನು ಕೂಡ ಕೆರೆಗೆ ತಳ್ಳಿ ಕೊಲೆಗೈದಿರುವ ದುರಂತ ಘಟನೆ ಹುಣಸೂರು ತಾ|ಮರೂರು ಗ್ರಾಮದಲ್ಲಿ ನಡೆದಿದೆ.

Advertisement

ಸ್ವಂತ ಮಗನಿಂದಲೇ ಕೃತ್ಯ ನಡೆದಿದ್ದು ಆರೋಪಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಅನ್ಯ ಕೋಮಿನ ಹುಡುಗನನ್ನ ತಂಗಿ ಪ್ರೀತಿಸಿದ್ದ ಹಿನ್ನಲೆ ದ್ವೇಷ ಬೆಳೆಸಿಕೊಂಡಿದ್ದ ಅಣ್ಣ ಕೃತ್ಯವೆಸಗಿದ್ದಾನೆ. ತಂಗಿಯನ್ನ ಕೆರೆಗೆ ತಳ್ಳಿದ ವೇಳೆ ರಕ್ಷಿಸಲು ಬಂದ ತಾಯಿಯನ್ನೂ ಸಹ ಕೆರೆಗೆ ತಳ್ಳಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಹಿರಿಕ್ಯಾತನಹಳ್ಳಿಯ ಅನಿತಾ(40) ಹಾಗೂ ಮಗಳು ಧನುಶ್ರೀ(19) ಮೃತ ದುರ್ದೈವಿಗಳು. ಹನಗೋಡು ಗ್ರಾಮದ ಅನ್ಯಕೋಮಿನ ಯುವಕನನ್ನ ಧನುಶ್ರೀ ಪ್ರೀತಿಸುತ್ತಿದ್ದಳು. ಈ ವಿಚಾರದಲ್ಲಿ ಅಣ್ಣ ತಂಗಿಯರ ನಡುವೆ ವೈ ಮನಸ್ಸು ಬೆಳೆದಿತ್ತು. ಆಗಾಗ ಇಬ್ಬರ ನಡುವೆ ಗಲಾಟೆ ಆಗಿತ್ತು. ಆದರೆ ಕಳೆ ದಿನ ಸಂಜೆ ಹೆಮ್ಮಿಗೆ ಗ್ರಾಮದಲ್ಲಿರುವ ಮಾವನ ಮನೆಗೆ ಹೋಗುವ ಕಾರಣ ನೀಡಿ ತಾಯಿ ಹಾಗೂ ತಂಗಿಯನ್ನ ನಿತಿನ್ ಬೈಕ್ ನಲ್ಲಿ ಕರೆದೊಯ್ದಿದ್ದಾನೆ.

Advertisement

ಬಳಿಕ ಮರೂರು ಕೆರೆ ಬಳಿ ಬೈಕ್ ನಿಲ್ಲಿಸಿ ಮೊದಲು ತಂಗಿಯನ್ನ ಕೆರೆಗೆ ತಳ್ಳಿದ್ದಾನೆ. ನಂತರ ಮಗಳನ್ನ ರಕ್ಷಿಸಲು ಬಂದ ತಾಯಿಯನ್ನೂ ಸಹ ಕೆರೆಗೆ ತಳ್ಳಿದ್ದಾನೆ. ನಂತರ ಪಶ್ಚಾತ್ತಾಪ ಪಟ್ಟು ತಾಯಿಯನ್ನ ರಕ್ಷಿಸಿಕೊಳ್ಳಲು ನಿತಿನ್ ಕೆರೆಗೆ ಹಾರಿದ್ದಾನೆ.ಆದ್ರೆ ಇಬ್ಬರೂ ಸಾವನ್ನಪ್ಪಿದ್ದಾರೆ.

ಒದ್ದೆ ಬಟ್ಟೆಯಲ್ಲೇ ಮನೆಗೆ ಹಿಂದಿರುಗಿ ತಂದೆ ಸತೀಶ್ ಬಳಿ ನಡೆದ ಘಟನೆಯನ್ನ ನಿತಿನ್ ತಿಳಿಸಿದ್ದಾನೆ.ಆರೋಪಿ ನಿತಿನ್ ನ ಹುಣಸೂರು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನ ಹೊರತೆಗೆದಿದ್ದಾರೆ.

Advertisement
Tags :
crimedeathLatestNewsNewsKannadaPOLICEಆರೋಪಿಕೊಲೆಲವ್ಹುಣಸೂರು
Advertisement
Next Article