ಹಿಂದು ದೇಗುಲದ ಅರ್ಚಕನ ಮನೆ ಮೇಲೆ ಗುಂಡಿನ ದಾಳಿ
ಒಟ್ಟಾವ: ಕೆನಡಾದಲ್ಲಿ ಹಿಂದು ದೇವಾಲಯಗಳ ಮೇಲೆ ದಾಳಿ, ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಖಲಿಸ್ತಾನಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಭಾರತವು ಕೆನಡಾಗೆ ಆಗ್ರಹಿಸಿದ್ದಕ್ಕೆ ಪ್ರಧಾನಿ ಜಸ್ಟಿನ್ ಟ್ರುಡೋ ಅವರು ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಸಿದ್ದಾರೆ.
ಆದರೆ, ಕೆನಡಾದಲ್ಲಿ ಹಿಂದು ದೇವಾಲಯಗಳು, ಹಿಂದುಗಳ ಮೇಲೆ ದೌರ್ಜನ್ಯ, ದಾಳಿಗಳು ಮುಂದುವರಿದಿವೆ. ಇದಕ್ಕೆ ನಿದರ್ಶನ ಎಂಬಂತೆ ಕೆನಡಾದ ಸರ್ರೆಯಲ್ಲಿರುವ ಹಿಂದು ದೇವಾಲಯದ ಮುಖ್ಯ ಅರ್ಚಕರೊಬ್ಬರ ಮಗನ ಮನೆಯ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.
ಸರ್ರೆಯಲ್ಲಿರುವ ಹಿಂದು ದೇವಾಲಯದಲ್ಲಿ ಮುಖ್ಯ ಅರ್ಚಕರಾಗಿರುವವರ ಪುತ್ರನ ಮನೆಯ ಮೇಲೆ ದುಷ್ಕರ್ಮಿಗಳು 14 ಸುತ್ತು ಗುಂಡು ಹಾರಿಸಿದ್ದಾರೆ. ಅದೃಷ್ಟವಶಾತ್, ಮನೆಯಲ್ಲಿದ್ದ ಯಾರಿಗೂ ತೊಂದರೆಯಾಗಿಲ್ಲ. ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ.ಖಲಿಸ್ತಾನಿಗಳೇ ಕೃತ್ಯ ಎಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
#KhaIistani Terrorist group put up posters at the gates of Hindu Temple in Canada 🇨🇦
-Khalistani Terrorists are pleading for an investigation by Canada into the killing of Terror group Khalistan Tiger Force's (KTF) chief Hardeep Singh #Nijjar who was shot dead on June 18th in… pic.twitter.com/2tzKWWKPwo
— Nikki (@nikkis_logic) August 13, 2023