For the best experience, open
https://m.newskannada.com
on your mobile browser.
Advertisement

ಮನೆಗೆ ನುಗ್ಗಿ ನಗದು, ಚಿನ್ನಾಭರಣ ದೋಚಿ ಪರಾರಿಯಾದ ಕಳ್ಳರು

ಜಿಲ್ಲೆ ಚಿಂತಾಮಣಿ ನಗರದ ಅಗ್ರಹಾರ ಬಡಾವಣೆಯಲ್ಲಿ ಕಳ್ಳರು ಮನೆಗೆ ನುಗ್ಗಿ ಸಿಕ್ಕಿದ್ದನ್ನೆಲ್ಲಾ ದೋಚಿ ಪರಾರಿಯಾದ ಘಟನೆ ನಡೆದಿದೆ.
08:44 AM Jan 27, 2024 IST | Gayathri SG
ಮನೆಗೆ ನುಗ್ಗಿ ನಗದು  ಚಿನ್ನಾಭರಣ ದೋಚಿ ಪರಾರಿಯಾದ ಕಳ್ಳರು

ಚಿಕ್ಕಬಳ್ಳಾಪುರ: ಜಿಲ್ಲೆ ಚಿಂತಾಮಣಿ ನಗರದ ಅಗ್ರಹಾರ ಬಡಾವಣೆಯಲ್ಲಿ ಕಳ್ಳರು ಮನೆಗೆ ನುಗ್ಗಿ ಸಿಕ್ಕಿದ್ದನ್ನೆಲ್ಲಾ ದೋಚಿ ಪರಾರಿಯಾದ ಘಟನೆ ನಡೆದಿದೆ.

Advertisement

ಗೋಡಂಬಿ ವ್ಯಾಪಾರಿ ಪ್ರಭಲಾಂಬ ಎನ್ನುವವರು ತಮ್ಮ ಮನೆಗೆ ಬೀಗ ಹಾಕಿ ಕುಟುಂಬ ಸಮೇತ ಸಂಬಂಧಿಕರ ಮನೆಗೆ ತೆರಳಿದ್ದಾಗ ಈ ಘಟನೆ ನಡೆದಿದೆ. ರಾತ್ರಿ ವೇಳೆ ಮನೆಯ ಬೀಗ ಮುರಿದು, ಒಳನುಗ್ಗಿ ಬೀರ್‌ನಲ್ಲಿದ್ದ ಒಂದೂವರೆ ಲಕ್ಷ ನಗದು ಹಣ, 300 ಗ್ರಾಂ ಚಿನ್ನಾಭರಣಗಳು, 2.5 ಕೆಜಿ ಬೆಳ್ಳಿ ಆಭರಣಗಳನ್ನ ಕದ್ದಿದ್ದಾರೆ.

ಮನೆಯವರು ಮರುದಿನ ಸಂಜೆ ವಾಪಸ್‌ ಮನೆಗೆ ಹಿಂದಿರುಗಿದ ವೇಳೆ ಈ ಘಟನೆ ಬಗ್ಗೆ ತಿಳಿದಿದೆ. ಸ್ಥಳಕ್ಕೆ ಚಿಂತಾಮಣಿ ನಗರ ಠಾಣೆಯ ಪೋಲಿಸರು ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Advertisement

Advertisement
Tags :
Advertisement