ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಹಿಂದುಗಳ ಮೇಲೆ ಹಲ್ಲೆಗಳು, ಹತ್ಯೆ ಹೆಚ್ಚಾಗಿದೆ : ಸಿದ್ದು ವಿರುದ್ಧ ಕಟೀಲ್‌ ಕಿಡಿ

ನಗರದಲ್ಲಿ ಸಿದ್ದರಾಮಯ್ಯ ಸರಕಾರದ ವಿರುದ್ಧ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರಕಾರ ಬಂದ ಮೇಲೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ್ರೆ, ಆತಂಕವಾದ ತಾಂಡವವಾಡುತ್ತೆ. ವಿಧಾನ ಸೌಧದಲ್ಲೂ ಪಾಕಿಸ್ತಾನ ಜಿಂದಾಬಾದ್ ಮೊಳಗಿತು. ಹಿಂದುಗಳ ಮೇಲೆ ಅತೀ ಹೆಚ್ಚು ಹತ್ಯೆ ಹಲ್ಲೆಗಳು ಆರಂಭವಾಗಿದೆ.
03:23 PM Apr 22, 2024 IST | Nisarga K
ಹಿಂದುಗಳ ಮೇಲೆ ಹಲ್ಲೆಗಳು, ಹತ್ಯೆ ಹೆಚ್ಚಾಗಿದೆ : ಸಿದ್ದು ವಿರುದ್ಧ ಕಟೀಲ್‌ ಕಿಡಿ

ಮಂಗಳೂರು: ನಗರದಲ್ಲಿ ಸಿದ್ದರಾಮಯ್ಯ ಸರಕಾರದ ವಿರುದ್ಧ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರಕಾರ ಬಂದ ಮೇಲೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ್ರೆ, ಆತಂಕವಾದ ತಾಂಡವವಾಡುತ್ತೆ. ವಿಧಾನ ಸೌಧದಲ್ಲೂ ಪಾಕಿಸ್ತಾನ ಜಿಂದಾಬಾದ್ ಮೊಳಗಿತು. ಹಿಂದುಗಳ ಮೇಲೆ ಅತೀ ಹೆಚ್ಚು ಹತ್ಯೆ ಹಲ್ಲೆಗಳು ಆರಂಭವಾಗಿದೆ.

Advertisement

ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ಮಗಳ ಹತ್ಯೆ ನಡೆದಿದೆ. ಹತ್ಯೆಯ ಹಿನ್ನಲೆಯನ್ನ ತನಿಖೆ ಮಾಡುವ ಮುಂಚೆಯೇ ಸಿದ್ದರಾಮಯ್ಯ ಹಗುರ ವಾಗಿರುವ ಹೇಳಿಕೆ ಕೊಡ್ತಾರೆ. ಇದು ಸಿದ್ದರಾಮಯ್ಯನವರ ಇವತ್ತು ನಿನ್ನೆಯ ಶೈಲಿಯಲ್ಲ. ಮಂಗಳೂರಲ್ಲಿ ಕುಕ್ಕರ್ ಬಾಂಬ್ ಸ್ಫೋಟವಾದಗ ಡಿಕೆ ಶಿವಕುಮಾರ್ ಇದೆ ರೀತಿ ಹೇಳಿಕೆ ಕೊಟ್ಟಿದ್ರು. ತನಿಖೆಯಲ್ಲಿ ಸಾಬೀತಾದ ಬಳಿಕ ವಿಷಯಂತರ ಮಾಡಿದ್ರು. ಕೃತ್ಯಗಳ ಹಿಂದಿನ ತನಿಖೆ ಮಾಡುವ ಬದಲು ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ. ಡಿಜೆ ಹಳ್ಳಿ, ಕೆಜಿ ಹಳ್ಳಿ, ರಾಮೇಶ್ವರಂ ಕೆಫೆ ಬ್ಲಾಸ್ಟ್ ಆದಾಗ ತಿರುಚುವ ಕೆಲಸ ಮಾಡಿತ್ತು. ಅಖಂಡ ಶ್ರೀನಿವಾಸ್ ಮೂರ್ತಿಯವರ ಮನೆ ಮೇಲೆ ದಾಳಿಯಾದಗ. ಅವರ ಮನೆಗೆ ಯಾವುದೇ ಕಾಂಗ್ರೆಸ್ ಮುಖಂಡ ಹೋಗಿಲ್ಲ. ನೇಹಾ ಹತ್ಯೆಯಾಗಿದೆ ಅವರದ್ದೇ ಪಕ್ಷದ ಕಾರ್ಪೋರೇಟರ್ ಮಗಳು. ಮನೆಗೆ ಹೋಗಿ ಸಾಂತ್ವನ ಹೇಳುವ ಕೆಲಸವನ್ನ ಮಾಡಿಲ್ಲ. ಪ್ರಕರಣವನ್ನ ಸಿಬಿಐಗೆ ವಹಿಸಬೇಕು ಎಂದು ನಾವು ಅಗ್ರಹಿಸುತ್ತೇವೆ.

ನಮ್ಮ ಸರಕಾರ ಇದ್ದಾಗ ಶಿವಮೊಗ್ಗ ಹರ್ಷ ಹತ್ಯೆಯಾದಗ, ಪ್ರವೀಣ್ ನೆಟ್ಟಾರ್ ಹತ್ಯೆ ಆದಾಗ ತಕ್ಷಣ ಪರಿಹಾರ ನೀಡುವ ಕೆಲಸ ಮಾಡಿದ್ದೇವೆ. ಕಾಂಗ್ರೆಸ್ ಜೊತೆ ಎಸ್ ಡಿ ಪಿ ಐ ಒಳ ಸಂಬಂಧ ಇರಿಸಿಕೊಂಡಿದೆ. ಇವತ್ತು ಪಿ ಎಫ್ ಐ ನಿಷೇಧವಾಗಿದೆ..ಇದರಿಂದ ಹತ್ಯೆಗಳು ನಿಯಂತ್ರಣಕ್ಕೆ ಬಂದಿತ್ತು. ಈಗ ಸಿದ್ದರಾಮಯ್ಯ ಸರಕಾರದ ತುಷ್ಠಿಕರಣದಿಂದ ಮತ್ತೆ ಇಂತಹ ಹತ್ಯೆಗಳು ಜಾಸ್ತಿಯಾಗುತ್ತಿದೆ. ತುಷ್ಠಿಕರಣದಿಂದ ನೀತಿಯಿಂದಾಗಿ ಇವತ್ತು ಇಲ್ಲಿನ ಬಹುಸಂಖ್ಯಾತ ಹಿಂದುಗಳಿಗೆ ಬದುಕು ಕಷ್ಟವಾಗಿದೆ.

Advertisement

ಹತ್ಯೆಯಾದ್ರೆ ಹತ್ಯೆಯ ತನಿಖೆಯನ್ನ ಕಾಂಗ್ರೆಸ್ ಮಾಡ್ತಾಯಿಲ್ಲ. ಎನ್ ಐ ಎ ಸಕ್ರಿಯವಾಗಿರೋದ್ರಿಂದ ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ತನಿಖೆಯಾಗಿದೆ. ಕಾಂಗ್ರೆಸ್ ಇದ್ದಿದ್ರೆ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣ ಹಳ್ಳ ಹಿಡಿಯುತ್ತಿತ್ತು. ನೇಹಾ ಕುಟುಂಬದವರಿಗೂ ಪರಿಹಾರ ನೀಡುವ ಕೆಲಸ ಮಾಡಬೇಕು. ಕಾಂಗ್ರೆಸ್ ಕೈ ಗೆ ಚೊಂಬು,, ನೀವು ಈ ರಾಜ್ಯಕ್ಕೆ ಬಾಂಬ್ ಕೊಟ್ಟವರು ಅದಕ್ಕೆ ನಿಮಗೆ ಚೊಂಬು. ನಮ್ಮ ಶಾಸಕರಿಗೆ ನೀವು ಕೊಟ್ಟ ಅನುದಾನ ಎಷ್ಟು ಬಹಿರಂಗ ಪಡಿಸಿ. ಅವ್ರ ಪಕ್ಷದ ಶಾಸಕನ ನಿಧಿಯೇ ಕೊಟ್ಟಿಲ್ಲ. ಗ್ಯಾರಂಟಿಯನ್ನ ಸಮರ್ಪಕವಾಗಿ ನೀಡುತ್ತಿಲ್ಲ.

ಮುಂದಿನ ಒಂದು ವರ್ಷದಲ್ಲಿ ಕರ್ನಾಟಕ ದಿವಾಳಿಯಾಗುತ್ತೆ. ಕೇರಳ ರಾಜ್ಯ ದಿವಾಳಿಯಾದಗ ಹಾಗೆ ಕರ್ನಾಟಕವೂ ದಿವಾಳಿಯಾಗುತ್ತೆ. 80% ಸರಕಾರ ಇದು, ಇದನ್ನ ಗುತ್ತಿಗೆದಾರರೇ ಹೇಳುತ್ತಿದ್ದಾರೆ ಎಂದರು.

Advertisement
Tags :
attackCm SiddaramaiahcrimeHINDULatestNewsmangaluruNALIN KUMAR KATEELNewsKarnataka
Advertisement
Next Article