ಕಿಟೆಲ್ ಕಲಾ ಮಹಾವಿದ್ಯಾಲಯದಲ್ಲಿ ʼಸಂವಿಧಾನ ಸಮರ್ಪಣ ದಿನʼ ಆಚರಣೆ
ಧಾರವಾಡ: ನಗರದ ಕಿಟೆಲ್ ಕಲಾ ಮಹಾವಿದ್ಯಾಲಯದಲ್ಲಿ 2023ರ ನವೆಂಬರ್ 25 ರಂದು "ಸಂವಿಧಾನ ಸಮರ್ಪಣ ದಿನ" ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಸುಪ್ರೀಯಾ ಇವರು ಪ್ರಾರ್ಥನೆ ಮೂಲಕ ಚಾಲನೆ ನೀಡಿದರು.
ಸ್ವಾಗತ ಮತ್ತು ಸಂಪನ್ಮೂಲ ವ್ಯಕ್ತಿ ಪರಿಚಯವನ್ನು ಸ್ವಾಮಿ ಫ್ರಾನ್ಸಿಸ್ ಅಲ್ವೇಡಾ ಜೆ. ಸಿ. ಇವರು ನೇರವೆರಿಸಿಕೊಟ್ಟರು. ಫ್ರಾನ್ಸಿಸ್ ಫರ್ನಾಂಡಿಸ್ ಜೆ. ಸಿ. ಇವರು ಪ್ರಾಸ್ತಾವಿಕ ನುಡಿಗಳನ್ನ ಆಡಿದರು. ಈ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳಿಗೆ ಪುಷ್ಪಗುಚ್ಛ ನೀಡಿ ಅಭಿನಂದಿಸಲಾಯಿತು. ಕುಮಾರ ಪ್ರಕಾಶ್ ಇವರು ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ನೇರವೆರಿಸಿಕೊಟ್ಟರು.
ಎಲ್ಲಾ ಅತಿಥಿಗಳು ಭಾರತದ ನಕ್ಷೆಗೆ ಸಂವಿಧಾನದ ಮೂಲಾಂಶಗಳನ್ನೊಳಗೊಂಡ ಚಿತ್ರಗಳನ್ನು ಅಂಟಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು ನಂತರ ಸಾಮಾಜಿಕ ಹೋರಾಟಗಾರರು, ಪತ್ರಕರ್ತರು ಬೆಂಗಳೂರು ಆದ ಶಿವಸುಂದರ ಇವರು ವಿಶೇಷ ಉಪನ್ಯಾಸ ನೀಡಿ, ವಿದ್ಯಾರ್ಥಿಗಳೊಂದಿಗೆ ಸಂವಾದ ಕೂಡ ನಡೆಸಿದರು. ನಂತರ ಡಾ. ರೇಖಾ ಜೋಗುಳ ಪ್ರಾಚಾರ್ಯರು ಕಿಟೆಲ್ ಕಲಾ ಮಹಾವಿದ್ಯಾಲಯ, ಧಾರವಾಡ ಇವರು ತಮ್ಮ ಅಧ್ಯಕ್ಷಿಯ ನುಡಿಗಳನ್ನು ಆಡಿದರು.
ಕಾರ್ಯಕ್ರಮದ ಕೊನೆಯ ಘಟ್ಟವಾದ ವಂದನಾರ್ಪಣೆಯನ್ನು ವೆಂಕಮ್ಮ ಸೋಮಾಪುರ ಉಪಾಧ್ಯಕ್ಷರು ಸಾಧನ ಮಾನವ ಹಕ್ಕುಗಳ ಕೇಂದ್ರ ಕರ್ನಾಟಕ ಇವರು ನೇರವೆರಿಸಿದರು. ಸುಬ್ರಮಣ್ಯ ಕಾರ್ಯಕ್ರಮವನ್ನು ನಿರುಪಿಸಿದರು. ಮಹಾವಿದ್ಯಾಲಯದ ಎಲ್ಲಾ ಭೋದಕ, ಭೋದಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.