’ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ: ಹೀಗಂದಿದ್ಯಾಕೆ ದರ್ಶನ್ ?
ಬೆಂಗಳೂರು: ನಟ ದರ್ಶನ್ ಬಣ್ಣದ ಬದುಕಿಗೆ ಕಾಲಿಟ್ಟು ಬರೋಬ್ಬರಿ 25 ವರ್ಷಗಳು. ಇದರ ನೆನಪಿಗಾಗಿ ಶ್ರೀರಂಗಪಟ್ಟಣದಲ್ಲಿ ‘ಬೆಳ್ಳಿ ಪರ್ವ ಡಿ 25’ ಅನ್ನೋ ಅದ್ದೂರಿ ಕಾರ್ಯಕ್ರಮ ಮಾಡಲಾಯ್ತು.
ಇನ್ನು, ಕಾರ್ಯಕ್ರಮದಲ್ಲಿ ಮಾತಾಡಿದ ನಟ ದರ್ಶನ್, ನನ್ನ ಜೀವನ ನನ್ನ ಸೆಲೆಬ್ರಿಟಿಗಳಿಗೆ ಮಾತ್ರ. ನಾನು ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳಲ್ಲ, ನನಗೆ ಸಿನಿಮಾ ಮಾತ್ರ ಇಂಪಾರ್ಟೆಂಟ್ ಎಂದರು.
ನಾನು ಇವತ್ತಿಗೂ ಹೇಳ್ತಾ ಇದೀನಿ, ಎಲ್ಲಾ ಬದಿಗಿಡ್ತೀನಿ. ನನಗೆ ನನ್ನ ಅಭಿಮಾನಿಗಳು ಮುಖ್ಯ, ಕೆಲಸ ಮುಖ್ಯ, ಇನ್ಯಾರೇ ಆಗಲೀ ಏನೇ ಆಗಲೀ ಏಯ್ ಥೂ. ಏಯ್ ಥೂ ಅನ್ನೋ ಪದ ನನಗೆ ತುಂಬಾ ಇಷ್ಟ. ಕಾರಣ ನನಗೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳುವಷ್ಟು ಟೈಮ್ ಇಲ್ಲ. ನನಗೆ ಆ ಪುರುಸೊತ್ತು ಇಲ್ಲ. ಏಕೆಂದರೆ, ನಾನು ಬೆಳಗ್ಗೆ ಎದ್ದ ತಕ್ಷಣ ನನ್ನ ಕೆಲಸ ಏನು, ಮುಂದೇನು ಮಾಡಬೇಕು ಅಂತಷ್ಟೇ ಕನಸು ಕಾಣೋದು. ಇವತ್ತು ಇವಳು ಇರ್ತಾಳೆ, ನಾಳೆ ಅವಳು ಇರ್ತಾಳೆ. ಏಯ್ ಹೋಗ್ರೇ ನಿಮ್ಮ ಅಜ್ಜಿನೇ ಬಡಿಯಾ. ನಿಮ್ಮಗಳ ಬಗ್ಗೆ ತಲೆ ಕೆಡಿಸ್ಕೊಂಡು ನಾನ್ಯಾಕೇ ಟೈಮ್ ವೇಸ್ಟ್ ಮಾಡಲಿ ಎಂದು ಖಡಕ್ ಆಗಿ ಹೇಳಿದ್ದಾರೆ.