For the best experience, open
https://m.newskannada.com
on your mobile browser.
Advertisement

ಅಮಿತ ಷಾ ̧ ನಿರ್ಮಲಾ ಸೀತಾರಾಮನ್ ರಾಜ್ಯದಲ್ಲಿ ಸುಳ್ಳು ಹೇಳಿದ್ದಾರೆ : ದಿನೇಶ್ ಗುಂಡೂರಾವ್ ಕಿಡಿ

ನಗರದಲ್ಲಿಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಇಂದು ಸುದ್ದಿಗೋಷ್ಠಿ ನಡೆಸಿ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.
07:03 PM Apr 04, 2024 IST | Nisarga K
ಅಮಿತ ಷಾ ̧ ನಿರ್ಮಲಾ ಸೀತಾರಾಮನ್ ರಾಜ್ಯದಲ್ಲಿ ಸುಳ್ಳು ಹೇಳಿದ್ದಾರೆ   ದಿನೇಶ್ ಗುಂಡೂರಾವ್ ಕಿಡಿ
ನಗರದಲ್ಲಿಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಇಂದು ಸುದ್ದಿಗೋಷ್ಠಿ ನಡೆಸಿ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.

ಮಂಗಳೂರು: ನಗರದಲ್ಲಿಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಇಂದು ಸುದ್ದಿಗೋಷ್ಠಿ ನಡೆಸಿ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.

Advertisement

ಅಮಿತ್ ಷಾ ಮತ್ತು ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ಬಂದು ಸುಳ್ಳು ಹೇಳಿದ್ದಾರೆ. ಫೈನಾನ್ಸ್ ಕಮೀಷನ್ ನಲ್ಲಿ ಹಣ ಕೊಟ್ಟಿರೋದಾಗಿ ನಿರ್ಮಲ ಸೀತಾರಾಮನ್ ಹೇಳಿದ್ದಾರೆ. ಅಮಿತ್ ಷಾ, ಬರ ಪರಿಹಾರ ವಿಚಾರದಲ್ಲಿ ಕರ್ನಾಟಕ ಸರಿಯಾದ ದಾಖಲೆ ಸಲ್ಲಿಸಿಲ್ಲ ಅಂತಾ ಹೇಳಿದ್ದಾರೆ. ಇದು ಶುದ್ಧವಾದ ಸುಳ್ಳು,ಕರ್ನಾಟಕ ಸಲ್ಲಿಸಿರುವ ವರದಿಗೆ ದಾಖಲೆಗಳಿವೆ. ಅಮಿತ್ ಷಾ ಒಬ್ಬ ಮಹಾನ್ ಸುಳ್ಳುಗಾರ. ಕನಿಷ್ಠ ಸಭೆ ಮಾಡಲೂ ಅವಕಾಶವನ್ನು ಅಮಿತ್ ಷಾ ನೀಡಿಲ್ಲ. ರಾಜ್ಯಕ್ಕೆ ಕೇಂದ್ರ ಸರ್ಕಾರ ನಯಾಪೈಸೆಯನ್ನು ಕೊಟ್ಟಿಲ್ಲ. ಈ ಅನ್ಯಾಯವನ್ನು ಹೇಳಲು ರಾಜ್ಯದ ಬಿಜೆಪಿ ಮುಖಂಡರಿಗೆ ಆಗಿಲ್ಲ.

ರಾಜ್ಯಕ್ಕೆ ಆದ ಅನ್ಯಾಯದ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಗೆ ಹೋಗಿದ್ದೇವೆ. ಅಮಿತ್ ಷಾ ಚನ್ನಪಟ್ಟಣ ದ ಭಾಷಣವನ್ನು ಕೋರ್ಟ್ ಗೆ ರಿಪ್ಲೈ ಆಗಿ ನೀಡಲಿ. ಮೋದಿ ಮತ್ತೊಂದು ದೊಡ್ಡ ಸುಳ್ಳುಗಾರ ಎಂದು ಕೇಂದ್ರ ಸರ್ಕಾರದ ವಿರುದ್ಧ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.

Advertisement

Advertisement
Tags :
Advertisement