ಉಚಿತವಾಗಿ ಯಾವುದನ್ನೂ ಕೊಡಬೇಡಿ ಎಂದ ಇನ್ಫೋಸಿಸ್ ನಾರಾಯಣಮೂರ್ತಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವುದು ಪಂಚ ಭರವಸೆಗಳ ಮೂಲಕ. ಇದೀಗ ಈ ಭರವಸೆಗಳನ್ನೇ ಪ್ರಶ್ನಿಸುವಂತಹ ಹೇಳಿಕೆಯೊಂದನ್ನು ಇನ್ಫೋಸಿಸ್ ಸಂಸ್ಥಾಪಕ ಎನ್. ಆರ್. ನಾರಾಯಣ ಮೂರ್ತಿ ನೀಡಿದ್ದಾರೆ.
02:28 PM Nov 30, 2023 IST
|
Ashika S
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವುದು ಪಂಚ ಭರವಸೆಗಳ ಮೂಲಕ. ಇದೀಗ ಈ ಭರವಸೆಗಳನ್ನೇ ಪ್ರಶ್ನಿಸುವಂತಹ ಹೇಳಿಕೆಯೊಂದನ್ನು ಇನ್ಫೋಸಿಸ್ ಸಂಸ್ಥಾಪಕ ಎನ್. ಆರ್. ನಾರಾಯಣ ಮೂರ್ತಿ ನೀಡಿದ್ದಾರೆ.
Advertisement
ಬೆಂಗಳೂರು ಟೆಕ್ ಸಮಿಟ್ನಲ್ಲಿ ಝೀರೋಧ ಸಂಸ್ಥೆಯ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಜೊತೆ ಸಂವಾದದಲ್ಲಿ ಪಾಲ್ಗೊಂಡಿದ್ದ ನಾರಾಯಣಮೂರ್ತಿ, ಯಾವುದನ್ನೂ ಕೂಡ ಉಚಿತವಾಗಿ ಕೊಡಬಾರದು. ಉಚಿತವಾಗಿ ಕೊಟ್ಟರೂ ಜೊತೆಯಲ್ಲಿ ಹೊಣೆಗಾರಿಕೆಯನ್ನೂ ಕೊಡಬೇಕು ಎಂದು ಕಿವಿಮಾತು ಹೇಳಿದ್ದಾರೆ.
'ಯಾವುದನ್ನೂ ಉಚಿತವಾಗಿ ಕೊಡಬಾರದು. ಸಬ್ಸಿಡಿ ಪಡೆಯುವ ವ್ಯಕ್ತಿ ಉತ್ತಮ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕು. ಮುಂದಿನ ತಲೆಮಾರಿಗೆ ಉತ್ತಮ ಭವಿಷ್ಯ ರೂಪಿಸುವ ಕೆಲಸಕ್ಕೆ ಬದ್ಧರಾಗಿರಬೇಕು,’ ಎಂದು ನಾರಾಯಣಮೂರ್ತಿ ಹೇಳಿದ್ದಾರೆ.
Advertisement
Advertisement
Next Article