ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ದುಬೈ: ಮಳೆ ಸಂಕಷ್ಟದಲ್ಲಿ ಸಿಲುಕಿದವರ ನೆರವಿಗೆ ಕನ್ನಡಿಗಾಸ್ ಹೆಲ್ಪ್ ಲೈನ್ ತಂಡ!

ಎಪ್ರಿಲ್ 16ರಂದು ಯುಎಇಯ ಇತಿಹಾಸದಲ್ಲೇ ಅತೀ ಹೆಚ್ಚಿನ ಮಳೆ ಸುರಿದು ಸೃಷ್ಟಿಯಾದ ನೆರೆಯಿಂದ ಶಾರ್ಜಾ ಮತ್ತು ದುಬೈನ ಹಲವು ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಜನಜೀವನ ಅಸ್ತವ್ಯಸ್ತವಾಗಿದ್ದು, ಜನರಿಗೆ ಊಟ, ನೀರು ಔಷಧಿಯ ಸಮಸ್ಯೆ ಎದುರಾಗಿರುವುದು ಮನಗಂಡು ಕನ್ನಡಿಗಾಸ್ ಹೆಲ್ಪ್ ಲೈನ್ ತಂಡ ನೆರವಿನ ಕಾರ್ಯಾಚರಣೆ ನಡೆಸಿದೆ.
10:01 AM Apr 21, 2024 IST | Ashitha S

ದುಬೈ: ಎಪ್ರಿಲ್ 16ರಂದು ಯುಎಇಯ ಇತಿಹಾಸದಲ್ಲೇ ಅತೀ ಹೆಚ್ಚಿನ ಮಳೆ ಸುರಿದು ಸೃಷ್ಟಿಯಾದ ನೆರೆಯಿಂದ ಶಾರ್ಜಾ ಮತ್ತು ದುಬೈನ ಹಲವು ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಜನಜೀವನ ಅಸ್ತವ್ಯಸ್ತವಾಗಿದ್ದು, ಜನರಿಗೆ ಊಟ, ನೀರು ಔಷಧಿಯ ಸಮಸ್ಯೆ ಎದುರಾಗಿರುವುದು ಮನಗಂಡು ಕನ್ನಡಿಗಾಸ್ ಹೆಲ್ಪ್ ಲೈನ್ ತಂಡ ನೆರವಿನ ಕಾರ್ಯಾಚರಣೆ ನಡೆಸಿದೆ.

Advertisement

ದುಬೈ ಇಂಡಿಯನ್ ಕಾನ್ಸುಲೇಟ್ ಅನುಮತಿ ಮತ್ತು ಸಹಯೋಗದಲ್ಲಿ ಕನ್ನಡಿಗಾಸ್ ಹೆಲ್ಪ್ ಲೈನ್ ತಂಡ ರಕ್ಷಣಾ ಬೋಟ್ ನಲ್ಲಿ ಊಟ, ನೀರು, ರೇಶನ್ ಗಳನ್ನು ಕಳೆದ ಮೂರು ದಿನಗಳಿಂದ ಸಂಕಷ್ಟದಲ್ಲಿರುವ ಅನಿವಾಸಿ ಭಾರತೀಯರಿಗೆ ಮಾತ್ರವಲ್ಲದೆ ನೂರಾರು ವಿದೇಶಿಯರಿಗೂ ಭೇದವಿಲ್ಲದೇ ನೆರವಿನ ಹಸ್ತನೀಡಿದೆ. ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಮುನ್ಸಿಪಾಲಿಟಿ ವಾಹನ ಚಾಲಕರಿಗೂ ಸ್ಥಳದಲ್ಲೇ ಊಟದ ವ್ಯವಸ್ಥೆ ಕಲ್ಪಿಸಿದೆ.

ಅಂತಾರಾಷ್ಟ್ರೀಯ ಕನ್ನಡಿಗಾಸ್ ಫೆಡರೇಷನ್ ನ ಹಿದಾಯತ್ ಅಡ್ಡೂರು, ಕೆಎನ್ಆರೈ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಒಕ್ಕಲಿಗರ ಸಂಘ ದುಬೈ ಅಧ್ಯಕ್ಷ ಕಿರಣ್ ಗೌಡ, ಕರ್ನಾಟಕ ಸಂಘ ದುಬೈ ಅಧ್ಯಕ್ಷ ಶಶಿಧರ ನಾಗರಾಜಪ್ಪ, ಉಪಾಧ್ಯಕ್ಷ ದಯಾ ಕಿರೋಡಿಯನ್, ದುಬೈ ಅನಿವಾಸಿ ಕನ್ನಡಿಗರು ಸ್ಥಾಪಕ ಇಮ್ರಾನ್ ಖಾನ್ ಎರ್ಮಾಳ್, ಸಮೀರ್ ಉದ್ಯಾವರ, ಫಿರೋಜ್, ಬಿಸಿಸಿಐ ಯುಎಇ ಪ್ರಧಾನ ಕಾರ್ಯದರ್ಶಿ ಅನ್ವರ್ ಹುಸೈನ್, ಓವರ್ಸೀಸ್ ಮೂವೀಸ್ ನ ದೀಪಕ್ ಸೋಮಶೇಖರ್, ಏಮ್ ಇಂಡಿಯಾ ಫೌಂಡೇಶನ್ ಮುಝಫ್ಫರ್ ಶೇಖ್, ಯೂಸುಫ್ ಶೇಖ್, ಬಾಹರ್ ಅಲ್ ನೂರ್ ನ ಇಸ್ಮಾಯಿಲ್, ಗಲ್ಫ್ ಗೆಳೆಯರು ತಂಡದ ಸಾಗರ್ ಶೆಟ್ಟರ್ ಆಹಾರ ಸಾಮಗ್ರಿಗಳನ್ನು ವ್ಯವಸ್ಥೆ ಮಾಡಿ, ಜನರಿಗೆ ತಲುಪಿಸುವ ಕಾರ್ಯ ನಡೆಸಿದೆ. ಪರಿಸ್ಥಿತಿ ಸಂಪೂರ್ಣವಾಗಿ ಸುಧಾರಿಸುವ ವರೆಗೂ ಈ ನೆರವಿನ ಕಾರ್ಯ ಮುಂದುವರೆಯಲಿದೆ.

Advertisement

ಮಳೆ ಸಂಕಷ್ಟದಲ್ಲಿರುವ ಯಾವುದೇ ಅನಿವಾಸಿ ಕನ್ನಡಿಗರು ಊಟ, ನೀರು, ರೇಶನ್, ಔಷಧಿಯ ಸಹಾಯ ಬೇಕಿದ್ದಲ್ಲಿ 971 55 111 8555, 971529214783, 971 52 466 8185, 971526995413, 97155 597 1414 ಈ ಸಂಖ್ಯೆಯನ್ನು ಸಂಪರ್ಕಿಸಬಹುದು.

Advertisement
Tags :
DUBAIHealplineindiaKARNATAKANewsKarnataka
Advertisement
Next Article