ದಕ್ಷಿಣ ಕನ್ನಡದ ಹಲವು ಕಡೆಗಳಲ್ಲಿ ಮುಂಜಾನೆ ತುಂತುರು ಮಳೆ
ಕಳೆದ ಕೆಲ ದಿನಗಳಿಂದ ಕಾದು ಕೆಂಡದಂತಾಗಿದ್ದ ದಕ್ಷಿಣ ಕನ್ನಡದ ಹಲವು ಕಡೆಗಳಲ್ಲಿ ಇಂದು(ಮಾ.22) ಬೆಳಗ್ಗೆ ಮಳೆ ಸುರಿದಿದೆ.
09:08 AM Mar 22, 2024 IST | Ashitha S
ಮಂಗಳೂರು: ಕಳೆದ ಕೆಲ ದಿನಗಳಿಂದ ಕಾದು ಕೆಂಡದಂತಾಗಿದ್ದ ದಕ್ಷಿಣ ಕನ್ನಡದ ಹಲವು ಕಡೆಗಳಲ್ಲಿ ಇಂದು(ಮಾ.22) ಬೆಳಗ್ಗೆ ಮಳೆ ಸುರಿದಿದೆ.
Advertisement
ಜಿಲ್ಲೆಯ ಮಂಗಳೂರು ನಗರ, ಮಂಗಳೂರು, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಸೇರಿ, ಬದಿಯಡ್ಕ, ಪಾಣಾಜೆ, ಸುಳ್ಯ ಸಹಿತ ಜಿಲ್ಲೆಯ ಹಲವು ಕಡೆ ಮಳೆಯಾಗಿದೆ.ಉಳಿದಂತೆ ಜಿಲ್ಲೆಯಾದ್ಯಂತ ಮೋಡ, ಸೆಕೆಯ ವಾತಾವರಣ ಇದೆ. ಇನ್ನು ಏಕಾಏಕಿ ಸುರಿದ ಮಳೆಗೆ ಜನ ಜೀವನ ಕೊಂಚ ಅಸ್ತವ್ಯಸ್ತವಾಗಿದೆ.
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಮುಂದಿನ ಎರಡು ದಿನಗಳ ಕಾಲ ಕರಾವಳಿ ಭಾಗದ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ .
Advertisement
Advertisement