ರಾಮ ಮಂದಿರದ 'ಆಮಂತ್ರಣ ಪತ್ರಿಕೆ'ಯ ಫಸ್ಟ್ ಲುಕ್ ವೈರಲ್; ಹೇಗಿದೆ ನೋಡಿ
ಅಯೋಧ್ಯೆ : ಹಿಂದೂಗಳ ಶ್ರದ್ಧಾ ಕೇಂದ್ರವಾಗಿ 500 ವರ್ಷಗಳ ಕನಸು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ ಮೂಲಕ ನನಸಾಗಲಿದ್ದು ಭಾವನಾತ್ಮಕ, ಐತಿಹಾಸಿಕ ಕ್ಷಣವನ್ನು ಮನೆ ಮನೆಗಳಲ್ಲಿ ಆಚರಿಸಲು ಜನವರಿ 22 ರಂದು ಎಲ್ಲರೂ ಸಿದ್ದರಾಗುತ್ತಿದ್ದಾರೆ.
ಇನ್ನು ಜ.22 ರಂದು ಅತ್ಯಂತ ಉತ್ಸಾಹದಿಂದ ನಡೆಯಲಿರುವ ಅಯೋಧ್ಯೆಯಲ್ಲಿ ರಾಮಮಂದಿರ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಲು ಟ್ರಸ್ಟ್ ಆಮಂತ್ರಣ ಪತ್ರಗಳನ್ನು ಕಳುಹಿಸಲು ಪ್ರಾರಂಭಿಸಿದೆ. ಜನವರಿ 16 ರಿಂದ ಒಂದು ವಾರದ ಆಚರಣೆ ಪ್ರಾರಂಭವಾಗಲಿದ್ದು, ಅದಕ್ಕಾಗಿ ಜನರಿಗೆ ಆಹ್ವಾನಗಳನ್ನು ಕಳುಹಿಸಲಾಗುತ್ತಿದೆ.
ಆದರೆ, ಈ ಒಂದು ವಾರದಲ್ಲಿ ಯಾತ್ರಾ ನಗರದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುವ ಸಂಭವವಿದ್ದು, ಆಹ್ವಾನವಿಲ್ಲದವರು ನಗರಕ್ಕೆ ಪ್ರಯಾಣಿಸುವುದನ್ನ ತಪ್ಪಿಸುವಂತೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ. ಇತ್ತ ಡಿವೈನ್ ಇಂಡಿಯಾ ತನ್ನ ಎಕ್ಸ್ ಖಾತೆಯಲ್ಲಿ ಸುಂದರವಾದ ಅಯೋಧ್ಯೆ ರಾಮ ಮಂದಿರದ 'ಆಮಂತ್ರಣ ಪತ್ರಿಕೆಯ ಮೊದಲ ನೋಟವನ್ನು ಹಂಚಿಕೊಂಡಿದೆ. ಇದು ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.