For the best experience, open
https://m.newskannada.com
on your mobile browser.
Advertisement

ಪಿಲಿಕುಳ ನಿಸರ್ಗಧಾಮದಿಂದ ತಪ್ಪಿಸಿಕೊಂಡ ದೈತ್ಯ ಕಾಳಿಂಗ ಸರ್ಪ: ಕಾರಣ ಇದೆ

ಪಂಜರದಲ್ಲಿದ್ದ ದೈತ್ಯ ಕಾಳಿಂಗ ಸರ್ಪವೊಂದು ತಪ್ಪಿಸಿಕೊಂಡು ಹೋಗಿ ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿ ಬೆಳಕಿಗೆ ಬಂದಿದೆ.
10:26 AM Mar 23, 2024 IST | Ashitha S
ಪಿಲಿಕುಳ ನಿಸರ್ಗಧಾಮದಿಂದ ತಪ್ಪಿಸಿಕೊಂಡ ದೈತ್ಯ ಕಾಳಿಂಗ ಸರ್ಪ  ಕಾರಣ ಇದೆ

ಮಂಗಳೂರು: ಪಂಜರದಲ್ಲಿದ್ದ ದೈತ್ಯ ಕಾಳಿಂಗ ಸರ್ಪವೊಂದು ತಪ್ಪಿಸಿಕೊಂಡು ಹೋಗಿ ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿ ಬೆಳಕಿಗೆ ಬಂದಿದೆ.

Advertisement

ಇಲ್ಲಿನ ಜೈವಿಕ ಉದ್ಯಾನವನದಲ್ಲಿ ಈ ಘಟನೆ ನಡೆದಿದ್ದು ತಪ್ಪಿಸಿಕೊಂಡ ಈ ಹೆಣ್ಣು ಕಾಳಿಂಗ ಸರ್ಪ ರಸ್ತೆ ದಾಟಿ ವಿಜ್ಞಾನ ಸೆಂಟರ್​ನತ್ತ ಸಾಗುತ್ತಿತ್ತು. ಸಾರ್ವಜನಿಕರು ಇದನ್ನು ಗಮನಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ನಿಸರ್ಗಧಾಮದ ಸಿಬ್ಬಂದಿ ಧಾವಿಸಿ ಅದನ್ನು ಸೆರೆ ಹಿಡಿದು ಮರಳಿ ಪಂಜರಕ್ಕೆ ಹಾಕಿದ್ದಾರೆ. ಈ ಗ ಸಂತನೋತ್ತಿಯ ಸಮಯವಾಗಿದ್ದು ಒಂದು ಹೆಣ್ಣು ಮತ್ತು ಗಂಡು ಗಾಳಿಂಗ ಸರ್ಪಗಳು ಕಾದಾಟ ಮಾಡುತ್ತಿದ್ದಾಗ ಪಂಜರದ ಮೆಶ್ ಲಿಂಕ್ ತಪ್ಪಿ ಈ ಹೆಣ್ಣು ಕಾಳಿಂಗ ಸರ್ಪ ಹೊರಕ್ಕೆ ತಪ್ಪಿಸಿ ಹೋಗಿದ್ದು ಇದನ್ನು ಗಮನಿಸಿದ ಸಿಬಂದಿ ಕೂಡಲೇ ಹಿಡಿದು ಸಂತಾನೋತ್ಪತ್ತಿ ಕೇಂದ್ರಕ್ಕೆ ಸಾಗಿಸಿದ್ದಾರೆ.

Advertisement

ಸಂತನೋತ್ಪತ್ತಿ ಸಂದರ್ಭ ಕಾಳಿಂಗ ಸರ್ಪಗಳ ಈ ಕಾದಾಟ ಒಂದು ಸಹಜ ಪ್ರಕ್ರೀಯೆ ಆಗಿದೆ. ತಪ್ಪಿಸಿಕೊಂಡ ಹೆಣ್ಣು ಕಾಳಿಂಗ ಆರು ವರ್ಷ ವಯಸ್ಸಾಗಿದ್ದು ಸುಮಾರು 8 ಅಡಿ ಉದ್ದವಿದೆ. ಹೆಣ್ಣು ಕಾಳಿಂಗ ಸಪೂರವಿದ್ದ ಕಾರಣ ಹೊರಗೆ ಹೋಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement
Tags :
Advertisement