ಸರ್ಕಾರಿ ಶಾಲೆಯಲ್ಲಿ ಎಲ್ಲರು ಓದಬೇಕು ಸರ್ಕಾರದ ಆಶಯವಾಗಿದೆ: ಶಿಕ್ಷಣ ಸಚಿವ ಮಧು ಬಂಗಾರಪ್ಪ
ಬೆಂಗಳೂರು: ಆಡುಗೋಡಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಣ ಜೊತೆಯಲ್ಲಿ ಕ್ರೀಡೆ ಚಟುವಟಿಕೆ ಮುಖ್ಯ ಎಂಬ ಚಿಂತನೆಯಲ್ಲಿ ರಾಜ್ಯದಲ್ಲಿರುವ ಸರ್ಕಾರಿ 100ಶಾಲೆಯ ಮಕ್ಕಳಿಗೆ ಪುಟ್ ಬಾಲ್ ತರಭೇತಿ ಮತ್ತು ದೈಹಿಕ ಶಿಕ್ಷಕರಿಗೂ ತರಬೇತಿ ಕಾರ್ಯಕ್ರಮ ITC ಸನ್ಫೀಸ್ಟ್ ಮತ್ತು STAIRS FOUNDATION ಮತ್ತು Six SSports - ಸೆಂಟರ್ ಫಾರ್ ಸ್ಪೋರ್ಟ್ಸ್ ಸೈನ್ಸ್ ಸಹಭಾಗಿತ್ವದಲ್ಲಿ ಬೌನ್ಸ್ ಆಫ್ ಜಾಯ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿದೆ.
ಶಿಕ್ಷಣ ಸಚಿವರಾದ ಮಧು ಬಂಗಾರಪ್ಪರವರು, ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಆಡುಗೋಡಿ ಬಿ.ಮೋಹನ್, ಸುದ್ದಗುಂಟೇ ಪಾಳ್ಯ ಮಂಜುನಾಥ್, ಚಂದ್ರಪ್ಪ, ಅಲಿ ಹ್ಯಾರಿಸ್ ಶೇರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಬಿಸ್ಕೆಟ್ಸ್ & ಕೇಕ್ಸ್, ITC ಫುಡ್ಸ್ ಲಿಮಿಟೆಡ್ ಮತ್ತು ಡಾ. ಭಾವನಾ ಶರ್ಮಾ, ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.
ಶಿಕ್ಷಣ ಸಚಿವರಾದ ಮಧು ಬಂಗಾರಪ್ಪರವರು ಮಾತನಾಡಿ ಸರ್ಕಾರಿ ಶಾಲೆಯ ಮಕ್ಕಳಿಗೆ ಶಿಕ್ಷಣದ ಜೊತೆಯಲ್ಲಿ ಕ್ರೀಡಾ ಚಟುವಟಿಕೆ ಮುಖ್ಯ, ಮಾನಸಿಕ,ದೃಹಿಕವಾಗಿ ಉತ್ತಮವಾಗಿರಲಿ ಕ್ರೀಡೆ ಆಡುವುದು ಸಹಕಾರಿಯಾಗಿದೆ.
ಗ್ರಾಮೀಣ ಭಾಗದಲ್ಲಿ ಕ್ರೀಡೆಗಳಿಗೆ ಉತ್ತೇಜನ ನೀಡಿದರೆ ಗ್ರಾಮೀಣ ಕ್ರೀಡಾ ಪ್ರತಿಭೆಗಳು ಹೊರಹೊಮ್ಮಲು ಸಾದ್ಯ. ಸರ್ಕಾರಿ ಶಾಲೆಯ ಮಕ್ಕಳಿಗೆ ಕ್ರೀಡೆಗಳಲ್ಲಿ ಭಾಗವಹಿಸಲು ಪ್ರೋತ್ಸಹ ನೀಡಬೇಕು. ಸರ್ಕಾರಿ ಶಾಲೆಯಲ್ಲಿ ಎಲ್ಲರು ಓದಬೇಕು ಎಂಬುದು ಸರ್ಕಾರದ ಆಶಯವಾಗಿದೆ.
ಗ್ರಾಮೀಣ ಭಾಗದಲ್ಲಿ ಮುಂದಿನ ವರ್ಷ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಲಾಗುವುದು, ಪ್ರತಿ ಶಾಲೆಯಲ್ಲಿ ದೃಹಿಕ ನೇಮಕ ಮಾಡಲಾಗುವುದು. ಸರ್ಕಾರಿ ಶಾಲೆಗಳಿಗೆ ಕರಂಟ್, ಕುಡಿಯವ ನೀರಿನ ಬಿಲ್ಲು ಪಾವತಿಸುವಂತಿಲ್ಲ ಎಂದು ಸರ್ಕಾರ ಆದೇಶ ಮಾಡಲಾಗಿದೆ
ರಾಜ್ಯದಲ್ಲಿ ಇರುವ 100ಸರ್ಕಾರಿ ಶಾಲೆಯ ಮಕ್ಕಳಿಗೆ ಪುಟ್ ಬಾಲ್ ತರಭೇತಿ, ಕ್ರೀಡಾ ಸಲಕರಣೆಯನ್ನು ಐ.ಟಿ.ಸಿ.ಸನ್ ಫೀಸ್ಟ್, ಸ್ಟಾರ್ ಫೌಂಡೇಷನ್ ಮತ್ತು ಬೌನ್ಸ್ ಆಫ್ ಜಾಯ್ ಸಂಸ್ಥೆ ಸಹಕಾರ ನೀಡುತ್ತಿದೆ ಎಂದು ಹೇಳಿದರು.