ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಹನುಮಾನ್​ ಸಿನಿಮಾ ಒಂದು ಮಾಸ್ಟರ್​ಪೀಸ್: ಸಚಿವ ಅನುರಾಗ್​ ಠಾಕೂರ್​ 

ತೆಲುಗಿನ ತೇಜ ಸಜ್ಜಾ ಅಭಿನಯದ ‘ಹನುಮಾನ್​’ ಸಿನಿಮಾ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 12ರಂದು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಯಿತು.
02:25 PM Jan 18, 2024 IST | Ashika S

ಬೆಂಗಳೂರು: ತೆಲುಗಿನ ತೇಜ ಸಜ್ಜಾ ಅಭಿನಯದ ‘ಹನುಮಾನ್​’ ಸಿನಿಮಾ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 12ರಂದು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಯಿತು.

Advertisement

ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳು ಕೂಡ ‘ಹನುಮಾನ್​’ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ.

ಶಿವರಾಜ್​ಕುಮಾರ್​, ನಂದಮೂರಿ ಬಾಲಕೃಷ್ಣ ಅವರ ಬಳಿಕ ಕೇಂದ್ರ ಸಚಿವ ಅನುರಾಗ್​ ಠಾಕೂರ್​  ಸಹ ‘ಹನುಮಾನ್​’ ಸಿನಿಮಾದ ಬಗ್ಗೆ ಟ್ವೀಟ್​ ಮಾಡಿದ್ದಾರೆ.

Advertisement

‘ಹನುಮಾನ್​’ ಚಿತ್ರತಂಡದವರು ಅನುರಾಗ್​ ಠಾಕೂರ್​ ಅವರನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದ ಫೋಟೋವನ್ನು ಅನುರಾಗ್​ ಠಾಕೂರ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

‘ನಮ್ಮ ಸನಾತನ ಧರ್ಮದ ಕುರಿತಾಗಿ ಇರುವ ಹನುಮಾನ್​ ಸಿನಿಮಾ ಒಂದು ಮಾಸ್ಟರ್​ಪೀಸ್​. ಸಿನಿಮಾದ ಗ್ರಾಫಿಕ್ಸ್​ ತುಂಬ ಚೆನ್ನಾಗಿದೆ. ಚಿತ್ರತಂಡದ ಶ್ರಮ ಎದ್ದು ಕಾಣುತ್ತಿದೆ. ಈ ತಂಡಕ್ಕೆ ನಾನು ಮೆಚ್ಚುಗೆ ಸೂಚಿಸುತ್ತೇನೆ. ನಿರ್ದೇಶಕ ಪ್ರಶಾಂತ್​ ವರ್ಮಾ, ನಟ ತೇಜ ಸಜ್ಜಾ, ನಿರ್ಮಾಪಕ ನಿರಂಜನ್​ ರೆಡ್ಡಿ ಹಾಗೂ ತಂಡದವರು ಅತ್ಯುತ್ತಮ ಸಿನಿಮಾ ಮಾಡಿದ್ದಾರೆ’ ಎಂದು ಅನುರಾಗ್​ ಠಾಕೂರ್​ ಪೋಸ್ಟ್​ ಮಾಡಿದ್ದಾರೆ.

Advertisement
Tags :
‘ಹನುಮಾನ್’LatetsNewsNewsKannadaತೇಜ ಸಜ್ಜಾಪ್ಯಾನ್-ಇಂಡಿಯಾಬಿಡುಗಡೆಸಂಕ್ರಾಂತಿ
Advertisement
Next Article