ಪ್ರಧಾನಿ ಮೋದಿಯನ್ನು ಭೇಟಿಯಾದ ಜೆಡಿಎಸ್ ನಾಯಕರ ನಿಯೋಗ
ನವದೆಹಲಿ: ಲೋಕಸಭಾ ಚುನಾವಣೆಯ ಮೈತ್ರಿ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಜೆಡಿಎಸ್ ನಾಯಕರ ನಿಯೋಗ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದೆ. ಸಂಸತ್ ಭವನದ ಪ್ರಧಾನಿ ಕಚೇರಿಗೆ ತೆರಳಿದ ಹೆಚ್.ಡಿ ದೇವೇಗೌಡ, ಹೆಚ್.ಡಿ ಕುಮಾರಸ್ವಾಮಿ, ಹೆಚ್.ಡಿ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಅವರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದಾರೆ.
ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಬಳಿಕ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು. ಪ್ರಧಾನಿಯವರನ್ನು ನಾನು, ದೇವೇಗೌಡರು, ರೇವಣ್ಣ ಮತ್ತು ಪ್ರಜ್ವಲ್ ಭೇಟಿ ಮಾಡಿದ್ದೆೇವೆ. ನಂತರ ನಾನು ಮತ್ತು ದೇವೇಗೌಡರು ಪ್ರಧಾನಿಯವರ ಜೊತೆ ಸುದೀರ್ಘ ಚರ್ಚೆ ಮಾಡಿದ್ದೇವೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ದೇವೆೇಗೌಡರ ಬಗ್ಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ನಮ್ಮ ಕುಟುಂಬದ ಬಗ್ಗೆ ಪ್ರಧಾನಿಗಳು ಇಟ್ಟ ವಿಶ್ವಾಸ ಇವತ್ತು ಹಾಗೇ ಇದೆ. ಈ ಹಿಂದೆಯೂ ಸಲಹೆ ನೀಡಿದ್ರು. ನೀನು ಒಳ್ಳೆ ಕೆಲಸ ಮಾಡಿದ್ರು ಗೌರವ ಸಿಗುತ್ತಿಲ್ಲ. ನೀನು ಯಾಕೆ ಹೀಗೆ ಈ ರೀತಿಯ ಕೆಲಸ ಮಾಡಿದೆ ಅಂತ ಹೇಳಿದ್ರು ಎಂದು ಹೆಚ್ಡಿಕೆ ಹೇಳಿದ್ದಾರೆ.