For the best experience, open
https://m.newskannada.com
on your mobile browser.
Advertisement

ಕಿಚ್ಚ ಸುದೀಪ್​ ವಿರುದ್ಧ ಆರೋಪ ಮಾಡಿದ್ದ ನಿರ್ಮಾಪಕನಿಗೆ ಹಿನ್ನಡೆ

ನಟ ಕಿಚ್ಚ ಸುದೀಪ್‌ ವಿರುದ್ದ ವಂಚನೆ ಹೇಳಿಕೆ ಸಂಬಂಧ ನಿರ್ಮಾಪಕರ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆ ರದ್ದು ಮಾಡಲು ಹೈಕೋರ್ಟ್‌ ನಿರಾಕರಿಸಿದೆ. ನಿರ್ಮಾಪಕ ಎನ್.ಎಂ.ಸುರೇಶ್ ಅವರು ನಟ ಸುದೀಪ್‌ ದಾಖಲಿಸಿದ್ದ ಮಾನ ನಷ್ಟ ಮೊಕದ್ದಮೆಯನ್ನು ರದ್ದು ಮಾಡುವಂತೆ ನಿರ್ಮಾಪಕ ಸಲ್ಲಿಸಿದ್ದ ಅರ್ಜಿಯನ್ನು ಹೈಕೊರ್ಟ್‌ ನಿರಾಕರಿಸಿದೆ.
10:56 AM Mar 27, 2024 IST | Nisarga K
ಕಿಚ್ಚ ಸುದೀಪ್​ ವಿರುದ್ಧ ಆರೋಪ ಮಾಡಿದ್ದ ನಿರ್ಮಾಪಕನಿಗೆ ಹಿನ್ನಡೆ
ಕಿಚ್ಚ ಸುದೀಪ್​ ವಿರುದ್ಧ ಆರೋಪ ಮಾಡಿದ್ದ ನಿರ್ಮಾಪಕನಿಗೆ ಹಿನ್ನಡೆ

ಬೆಂಗಳೂರು: ನಟ ಕಿಚ್ಚ ಸುದೀಪ್‌ ವಿರುದ್ದ ವಂಚನೆ ಹೇಳಿಕೆ ಸಂಬಂಧ ನಿರ್ಮಾಪಕರ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆ ರದ್ದು ಮಾಡಲು ಹೈಕೋರ್ಟ್‌ ನಿರಾಕರಿಸಿದೆ. ನಿರ್ಮಾಪಕ ಎನ್.ಎಂ.ಸುರೇಶ್ ಅವರು ನಟ ಸುದೀಪ್‌ ದಾಖಲಿಸಿದ್ದ ಮಾನ ನಷ್ಟ ಮೊಕದ್ದಮೆಯನ್ನು ರದ್ದು ಮಾಡುವಂತೆ ನಿರ್ಮಾಪಕ ಸಲ್ಲಿಸಿದ್ದ ಅರ್ಜಿಯನ್ನು ಹೈಕೊರ್ಟ್‌ ನಿರಾಕರಿಸಿದೆ.

Advertisement

ಈ ಹಿಂದೆ ಸುದ್ದಿಗೋಷ್ಠಿಯಲ್ಲಿ ಸುದೀಪ್ ವಿರುದ್ಧ ನಿರ್ಮಾಪಕರಾದ ಎಂ.ಎನ್.ಕುಮಾರ್, ಎನ್.ಎಂ.ಸುರೇಶ್ ಅವರು ಸುದೀಪ್‌ 9 ಕೋಟಿ ರೂ.ಗಳು ಅಡ್ವಾನ್ಸ್ ಪಡೆದು ಸಿನಿಮಾಗೆ ಡೇಟ್ಸ್ ಕೊಡದೇ ವಂಚನೆ ಮಾಡಿದ್ದಾರೆಂದು ಆರೋಪಿಸಿದ್ದರು ಈ ಸಂಬಂದ ಸುದೀಪ್‌ ಅವರು ನಿರ್ಮಾಪಕರ ವಿರುದ್ಧ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಹಾಗೂ ವಂಚನೆ ಕುರಿತು ಸಾಕ್ಷಿಯನ್ನು ಒದಗಿಸುವಂತೆ 10 ದಿನಗಳ ಸಮಯ ನೀಡಿದ್ದರು. ಆದರೆ ನಿರ್ಮಾಪಕರು ಮಾನನಷ್ಟ ಮೊಕದ್ದಮೆ ರದ್ದು ಮಾಡುಂತೆ ಹೈಕೊರ್ಟ್‌ಗೆ ಮನವಿ ಸಲ್ಲಿಸಿದ್ದರು ಇದೀಗ ಅದನ್ನು ಹೈಕೋರ್ಟ್‌ ನಿರಾಕರಿಸಿದೆ.

Advertisement
Advertisement
Tags :
Advertisement