For the best experience, open
https://m.newskannada.com
on your mobile browser.
Advertisement

ದೀದಿ ನಾಡಿನಲ್ಲಿ ಮತ್ತೊಂದು ಯುವತಿ ಮೇಲೆ ಭೀಕರ ಹಲ್ಲೆ !

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತ ಶಾಸಕರು ಮತ್ತು ಬೆಂಬಲಿಗರ ಮತ್ತಷ್ಟು ದುಷ್ಕೃತ್ಯಗಳು ಬೆಳಕಿಗೆ ಬಂದಿವೆ. ಇತ್ತೀಚೆಗಷ್ಟೇ ಟಿಎಂಸಿ ಶಾಸಕನ ಆಪ್ತನೊಬ್ಬ ವ್ಯಕ್ತಿಯೊಬನನ್ನು ವಿಚಾರಣೆ ಕರೆಸಿ ಭೀಕರವಾಗಿ ಹಲ್ಲೆ ನಡೆಸಿದ್ದ.
01:25 PM Jul 09, 2024 IST | Ashitha S
ದೀದಿ ನಾಡಿನಲ್ಲಿ ಮತ್ತೊಂದು ಯುವತಿ ಮೇಲೆ ಭೀಕರ ಹಲ್ಲೆ

ಕೋಲ್ಕತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತ ಶಾಸಕರು ಮತ್ತು ಬೆಂಬಲಿಗರ ಮತ್ತಷ್ಟು ದುಷ್ಕೃತ್ಯಗಳು ಬೆಳಕಿಗೆ ಬಂದಿವೆ. ಇತ್ತೀಚೆಗಷ್ಟೇ ಟಿಎಂಸಿ ಶಾಸಕನ ಆಪ್ತನೊಬ್ಬ ವ್ಯಕ್ತಿಯೊಬನನ್ನು ವಿಚಾರಣೆ ಕರೆಸಿ ಭೀಕರವಾಗಿ ಹಲ್ಲೆ ನಡೆಸಿದ್ದ. ಈ ಘಟನೆ ಬೆನ್ನಲ್ಲೇ ಅಂಥದ್ದೇ ಮತ್ತೊಂದು ವಿಡಿಯೋ ಇದೀಗ ಬೆಳಕಿಗೆ ಬಂದಿದೆ.

Advertisement

ಕೋಲ್ಕತಾದ ಅರಿದಹಾ ಪ್ರದೇಶದ ಟಿಎಂಸಿ ಶಾಸಕ ಮದನ್‌ ಮಿತ್ರಾನ ಆಪ್ತ ಜಯಂತ್‌ ಸಿಂಗ್‌ ಎಂಬಾತ ತನ್ನ ಬೆಂಬಲಿಗರ ಜೊತೆಗೂಡಿ ಯುವತಿಯೊಬ್ಬಳನ್ನು ಅತ್ಯಂತ ಭೀಕರವಾಗಿ ಹಲ್ಲೆ ಮಾಡಿದ ವಿಡಿಯೋ ಬೆಳಕಿಗೆ ಬಂದಿದೆ. ಈ ವಿಡಿಯೋದಲ್ಲಿ ನಾಲ್ಕು ಜನ ಯುವತಿಯ ಕೈ, ಕಾಲು ಹಿಡಿದುಕೊಂಡಿದ್ದರೆ, ಮತ್ತಿಬ್ಬರು ಆಕೆಯ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ.

https://x.com/amitmalviya/status/1810376944460116040

Advertisement

Advertisement
Tags :
Advertisement