ಹುಬ್ಬಳ್ಳಿ: ಬಸ್ ಡಿಕ್ಕಿ ಹೊಡೆದು ಕಾರು ಜಖಂ
ಬೇಂದ್ರೆ ಬಸ್, ಕಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಕಾರಿನ ಹಿಂಭಾಗ ಜಖಂಗೊಂಡ ಘಟನೆ ನಗರದ ಸರ್ ಸಿದ್ದಪ್ಪ ಕಂಬಳಿ ರಸ್ತೆ ಬಳಿಯಲ್ಲಿ ಇಂದು ನಡೆದಿದೆ.
09:55 AM Dec 25, 2023 IST
|
Ashika S
Tags :
ಹುಬ್ಬಳ್ಳಿ: ಬೇಂದ್ರೆ ಬಸ್, ಕಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಕಾರಿನ ಹಿಂಭಾಗ ಜಖಂಗೊಂಡ ಘಟನೆ ನಗರದ ಸರ್ ಸಿದ್ದಪ್ಪ ಕಂಬಳಿ ರಸ್ತೆ ಬಳಿಯಲ್ಲಿ ಇಂದು ನಡೆದಿದೆ.
Advertisement
ಇಲ್ಲಿನ ಟ್ರಾಫಿಕ್ ಸಿಗ್ನಲ್ ಬಳಿ ಬೆಂಗಳೂರು ಪಾಸಿಂಗ್ ಹೊಂದಿರುವ ಕಾರಿಗೆ ಬಸ್ ಡಿಕ್ಕಿ ಹೊಡೆದಿದ್ದು, ಕಾರಿನ ಹಿಂಭಾಗದ ಗ್ಲಾಸ್ ಸಂಪೂರ್ಣ ಒಡೆದು ಹೋಗಿದೆ. ಕೆಲಕಾಲ ಕಾರು ಚಾಲಕ ಹಾಗೂ ಬಸ್ ಚಾಲಕನ ನಡುವೆ ವಾಗ್ವಾದ ನಡೆಯಿತು.
ಸ್ಥಳಕ್ಕೆ ಆಗಮಿಸಿದ ಟ್ರಾಫಿಕ್ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ ಅಪಘಾತಕ್ಕೆ ಈಡಾದ ಬಸ್ ಹಾಗೂ ಕಾರನ್ನು ಟ್ರಾಫಿಕ್ ಪೊಲೀಸ್ ಠಾಣೆಗೆ ಕೊಂಡೊಯ್ದರು. ಕೇಶ್ವಾಪುರ ಪೂರ್ವ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Advertisement
Advertisement
Advertisement
Next Article