ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮುಂಬೈನಲ್ಲಿ ‘ಇಡ್ಲಿ ಗುರು’ ಹೋಟೆಲ್ ಮಾಲೀಕನ ಬಂಧನ..!

ಪ್ರಾಂಚೈಸಿ ಹೆಸರಲ್ಲಿ ಮೋಸ ಮಾಡಿದ ಆರೋಪದ ಮೇಲೆ ‘ಇಡ್ಲಿ ಗುರು’ ಹೋಟೆಲ್ ಮಾಲೀಕನ ಬಂಧನ ಆಗಿದೆ. ಹೋಟೆಲ್ ಇಡ್ಲಿ ಗುರು ಮಾಲೀಕ ಕಾರ್ತಿಕ್ ಶೆಟ್ಟಿ ಹಾಗೂ ಪತ್ನಿ ಮಂಜುಳಾ ಮೇಲೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಇಂದು ಮುಂಬೈನಲ್ಲಿ ಆರೋಪಿಯನ್ನು ಬಂಧಿಸಿ ವಿಚಾರಣೆಗೆ  ಬೆಂಗಳೂರಿಗೆ ಕರೆದುಕೊಂಡು ಬರುತ್ತಿದ್ದಾರೆ. 
04:08 PM Feb 14, 2024 IST | Ashitha S

ಬೆಂಗಳೂರು: ಪ್ರಾಂಚೈಸಿ ಹೆಸರಲ್ಲಿ ಮೋಸ ಮಾಡಿದ ಆರೋಪದ ಮೇಲೆ ‘ಇಡ್ಲಿ ಗುರು’ ಹೋಟೆಲ್ ಮಾಲೀಕನ ಬಂಧನ ಆಗಿದೆ. ಹೋಟೆಲ್ ಇಡ್ಲಿ ಗುರು ಮಾಲೀಕ ಕಾರ್ತಿಕ್ ಶೆಟ್ಟಿ ಹಾಗೂ ಪತ್ನಿ ಮಂಜುಳಾ ಮೇಲೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಇಂದು ಮುಂಬೈನಲ್ಲಿ ಆರೋಪಿಯನ್ನು ಬಂಧಿಸಿ ವಿಚಾರಣೆಗೆ  ಬೆಂಗಳೂರಿಗೆ ಕರೆದುಕೊಂಡು ಬರುತ್ತಿದ್ದಾರೆ.

Advertisement

ಕಾರ್ತಿಕ್ ಅಂಡ್ ಗ್ಯಾಂಗ್ ವಿರುದ್ಧ ಫ್ರಾಂಚೈಸಿ ನೀಡುವುದಾಗಿ ವಂಚಿಸಿದ ಆರೋಪ ಕೇಳಿಬಂದಿತ್ತು. ಎಫ್ಐಆರ್ ದಾಖಲಾಗ್ತಿದ್ದಂತೆ ಕಾರ್ತಿಕ್ ಶೆಟ್ಟಿ ತಲೆ ಮರೆಸಿಕೊಂಡಿದ್ದ. ಫ್ರಾಂಚೈಸಿ ನೀಡುವುದಾಗಿ ಹೇಳಿ ಕಾರ್ತಿಕ್ ಶೆಟ್ಟಿ ವಂಚಿಸಿದ್ದಾನೆ ಎಂದು ಚೇತನ್ ಅನ್ನೋರು ದೂರು ನೀಡಿದ್ದರು.

ಕಾರ್ತಿಕ್ ಶೆಟ್ಟಿ ಅಂಡ್ ಗ್ಯಾಂಗ್​, ನನ್ನ ಬಳಿ ಮೂರು ಲಕ್ಷ ರೂಪಾಯಿ ಪಡೆದು ಮೋಸ ಮಾಡಿದೆ. ಫುಡ್ ಕಾರ್ಟ್ ತಂದು ನಿಲ್ಲಿಸಿ ಸ್ವಲ್ಪ ದಿನಗಳ ಬಳಿಕ ವ್ಯಾಪಾರ ಆಗುತ್ತಿಲ್ಲ. ಬೇರೆಡೆ ವ್ಯಾಪಾರ ಮಾಡೋಣ ಅಂತಾ ಶಿಫ್ಟ್ ಮಾಡಿದ್ದರು. ಕಮೀಷನ್ ನೀಡುವುದಾಗಿ ಹೇಳಿ, ಯಾವುದೇ ಕಮೀಷನ್ ಸಹ ನೀಡಿಲ್ಲ. ಅಂಗಡಿಗಾಗಿ ಖರ್ಚಾದ ಹಣವನ್ನೂ ನೀಡಿಲ್ಲ. ಆರೋಪಿಗಳನ್ನು ಭೇಟಿಯಾದಾಗ ಜೀವ ಬೆದರಿಕೆ ಹಾಕಿದ್ದರು ಎಂದು ಪೊಲೀಸರಿಗೆ ಚೇತನ್ ದೂರು ನೀಡಿದ್ದರು. ವಂಚನೆ ಸಂಬಂಧ ಕಾರ್ತಿಕ್ ಶೆಟ್ಟಿ, ಅವರ ಪತ್ನಿ ಮಂಜುಳಾ ವಿರುದ್ಧ ಎಫ್​ಐ ಆರ್ ದಾಖಲಾಗಿತ್ತು.

Advertisement

Advertisement
Tags :
crimeHOTElindiaKARNATAKALatestNewsNewsKannadaPOLICEಇಡ್ಲಿ ಗುರುಬೆಂಗಳೂರು
Advertisement
Next Article