ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ʼನಾನು ನೋಡೋಕೆ ಅಷ್ಟೇನೂ ಚೆನ್ನಾಗಿಲ್ಲ ಅಂತ ಒಳ್ಳೆಯ ಸಿನಿಮಾ ಅವಕಾಶಗಳು ಬರಲಿಲ್ಲʼ

ಟಾಲಿವುಡ್​ ನಟ ಅಲ್ಲು ಅರ್ಜುನ್​ ನಟಿಸಿದ ‘ಆರ್ಯ’ ಸಿನಿಮಾ ತೆರೆಕಂಡು 20 ವರ್ಷ ಕಳೆದಿದೆ. ಆ ದಿನಗಳು ಹೇಗಿದ್ದವು ಎಂಬುದನ್ನು ಈಗ ಅಲ್ಲು ಅರ್ಜುನ್​ ನೆನಪಿಸಿಕೊಂಡಿದ್ದಾರೆ. ‘ಪುಷ್ಪ 2’ ಸಿನಿಮಾದ ಬಿಡುಗಡೆಗೆ ಸಜ್ಜಾಗುತ್ತಿರುವ ಅವರು ನೆನಪಿನ ಪುಟ ತೆರೆದಿದ್ದಾರೆ.
05:53 PM May 08, 2024 IST | Chaitra Kulal

ಟಾಲಿವುಡ್​ ನಟ ಅಲ್ಲು ಅರ್ಜುನ್​ ನಟಿಸಿದ ‘ಆರ್ಯ’ ಸಿನಿಮಾ ತೆರೆಕಂಡು 20 ವರ್ಷ ಕಳೆದಿದೆ. ಆ ದಿನಗಳು ಹೇಗಿದ್ದವು ಎಂಬುದನ್ನು ಈಗ ಅಲ್ಲು ಅರ್ಜುನ್​ ನೆನಪಿಸಿಕೊಂಡಿದ್ದಾರೆ. ‘ಪುಷ್ಪ 2’ ಸಿನಿಮಾದ ಬಿಡುಗಡೆಗೆ ಸಜ್ಜಾಗುತ್ತಿರುವ ಅವರು ನೆನಪಿನ ಪುಟ ತೆರೆದಿದ್ದಾರೆ.

Advertisement

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಅಲ್ಲು ಅರ್ಜುನ್ ಅವರು ಈ ವಿಚಾರವನ್ನು ವಿವರಿಸಿದ್ದಾರೆ. ‘ನಾನು ನಟಿಸಿದ ‘ಗಂಗೋತ್ರಿ’ ಸಿನಿಮಾ ಹಿಟ್​ ಆಯಿತು. ಆದರೆ ನಾನು ನೋಡೋಕೆ ಅಷ್ಟೇನೂ ಚೆನ್ನಾಗಿಲ್ಲ ಅಂತ ಅನಿಸಿದ್ದರಿಂದ ಒಳ್ಳೆಯ ಸಿನಿಮಾ ಅವಕಾಶಗಳು ನನಗೆ ಬರಲಿಲ್ಲ’ ಎಂದು ಅಲ್ಲು ಅರ್ಜುನ್​ ಹೇಳಿದ್ದಾರೆ. ಬಳಿಕ ‘ಆರ್ಯ’ ಸಿನಿಮಾದ ಅವಕಾಶ ಸಿಕ್ಕಿದ್ದು ಹೇಗೆ ಎಂದು ಅವರು ಮೆಲುಕು ಹಾಕಿದ್ದಾರೆ.

‘ಗಂಗೋತ್ರಿ ಸಿನಿಮಾ ಯಶಸ್ವಿ ಆಯಿತು. ಆದರೆ ನಟನಾಗಿ ನಾನು ಗುರುತಿಸಿಕೊಳ್ಳಲು ಸೋತೆ. ನಿತಿನ್ ನಟನೆಯ ‘ದಿಲ್​’ ಸಿನಿಮಾವನ್ನು ನೋಡಲು ಹೋಗಿದ್ದಾಗ ಅಲ್ಲಿ ನನಗೆ ಸುಕುಮಾರ್​ ಪರಿಚಯ ಆಯಿತು. ‘ಆರ್ಯ’ ಚಿತ್ರಕ್ಕಾಗಿ ಅವರು ನನ್ನನ್ನು ಭೇಟಿ ಮಾಡಿದರು. ಅವರು ಹೊಸ ನಿರ್ದೇಶಕನಾಗಿದ್ದರು. ಆದರೆ ಅವರು ಸ್ಕ್ರಿಪ್ಟ್ ಬರೆದ ರೀತಿ ನನಗೆ ತುಂಬ ಇಷ್ಟ ಆಯಿತು’ ಎಂದು ಅಲ್ಲು ಅರ್ಜುನ್​ ಹೇಳಿದ್ದಾರೆ.

Advertisement

ಅಲ್ಲಿಂದ ಶುರುವಾದ ಅಲ್ಲು ಅರ್ಜುನ್​ ಮತ್ತು ಸುಕುಮಾರ್​ ಅವರ ಸ್ನೇಹ ‘ಪುಷ್ಪ 2’ ಸಿನಿಮಾದ ತನಕ ಬಂದಿದೆ. ಈ ಸಿನಿಮಾ ಆಗಸ್ಟ್​ 15ರಂದು ಬಿಡುಗಡೆ ಆಗಲಿದೆ.

Advertisement
Tags :
AryaCINIMALatestNewsNewsKarnatakaಅಲ್ಲು ಅರ್ಜುನ್ಪುಷ್ಪ 2
Advertisement
Next Article