For the best experience, open
https://m.newskannada.com
on your mobile browser.
Advertisement

ಇಶಾನ್​​, ಶ್ರೇಯಸ್​​ಗೆ ಬಿಗ್​ ಶಾಕ್​​​ ಕೊಟ್ಟ ಬಿಸಿಸಿಐ!

ಟೀಮ್​ ಇಂಡಿಯಾದ ಹೆಡ್​​ ಕೋಚ್​​​ ರಾಹುಲ್​ ದ್ರಾವಿಡ್​​, ಸೆಲೆಕ್ಷನ್​ ಕಮಿಟಿ ಮುಖ್ಯಸ್ಥ ಅಜಿತ್​ ಅಗರ್ಕರ್​​ ಮಾತಿಗೂ ಕ್ಯಾರೇ ಎನ್ನದೆ ರಣಜಿ ಕ್ರಿಕೆಟ್​ ಆಡಲು ಹಿಂದೇಟು ಹಾಕುತ್ತಿದ್ದ ಇಶಾನ್​​ ಕಿಶನ್​​, ಶ್ರೇಯಸ್​ ಅಯ್ಯರ್​ಗೆ ಬಿಸಿಸಿಐ ಬಿಗ್​ ಶಾಕ್​ ಕೊಟ್ಟಿದೆ.
05:11 PM Feb 23, 2024 IST | Ashitha S
ಇಶಾನ್​​  ಶ್ರೇಯಸ್​​ಗೆ ಬಿಗ್​ ಶಾಕ್​​​ ಕೊಟ್ಟ ಬಿಸಿಸಿಐ

ಮುಂಬೈ: ಟೀಮ್​ ಇಂಡಿಯಾದ ಹೆಡ್​​ ಕೋಚ್​​​ ರಾಹುಲ್​ ದ್ರಾವಿಡ್​​, ಸೆಲೆಕ್ಷನ್​ ಕಮಿಟಿ ಮುಖ್ಯಸ್ಥ ಅಜಿತ್​ ಅಗರ್ಕರ್​​ ಮಾತಿಗೂ ಕ್ಯಾರೇ ಎನ್ನದೆ ರಣಜಿ ಕ್ರಿಕೆಟ್​ ಆಡಲು ಹಿಂದೇಟು ಹಾಕುತ್ತಿದ್ದ ಇಶಾನ್​​ ಕಿಶನ್​​, ಶ್ರೇಯಸ್​ ಅಯ್ಯರ್​ಗೆ ಬಿಸಿಸಿಐ ಬಿಗ್​ ಶಾಕ್​ ಕೊಟ್ಟಿದೆ.

Advertisement

ಉದ್ದೇಪೂರ್ವಕವಾಗಿ 2024ರ ರಣಜಿ ಟ್ರೋಫಿ ಪಂದ್ಯಗಳನ್ನು ಆಡದ ಕಾರಣ ಟೀಮ್​ ಇಂಡಿಯಾದ ಯುವ ಬ್ಯಾಟರ್​ ಇಶಾನ್ ಕಿಶನ್​​, ಶ್ರೇಯಸ್​ ಅಯ್ಯರ್​​​​ ಬಿಸಿಸಿಐ ಸೆಂಟ್ರಲ್​ ಕಾಂಟ್ರ್ಯಾಕ್ಟ್​​​ ಕಳೆದುಕೊಳ್ಳುವ ಅಪಾಯ ಎದುರಿಸುತ್ತಿದ್ದಾರೆ.

ಹೌದು, ಬಿಸಿಸಿಐ ಶ್ರೇಯಸ್ ಅಯ್ಯರ್ ಅವರನ್ನು ಕಳೆದ ವರ್ಷ ಮಾರ್ಚ್​​ ತಿಂಗಳಲ್ಲಿ 3 ಕೋಟಿ ರೂ. ನೀಡುವ ಬಿ ಗ್ರೇಡ್​ ಒಪ್ಪಂದಕ್ಕೆ ಸೇರಿಸಿಕೊಂಡಿತ್ತು. ಇಶನ್ ಕಿಶನ್ ಕೂಡ ವಾರ್ಷಿಕ 1 ಕೋಟಿ ರೂ. ಗಳಿಸೋ C ಗ್ರೇಡ್‌ಗೆ ಸೇರ್ಪಡೆಯಾಗಿದ್ದರು.

Advertisement

ಈಗದ  ಮಾಹಿತಿ ಪ್ರಕಾರ ಬಿಸಿಸಿಐ ಸದ್ಯದಲ್ಲೇ ಆಟಗಾರರಿಗೆ ಹೊಸ ಸೆಂಟ್ರಲ್​​ ಕಾಂಟ್ರ್ಯಾಕ್ಟ್​​​ ಅನೌನ್ಸ್​ ಮಾಡಲಿದೆ. ಹೀಗಾಗಿ ರಣಜಿ ಕ್ರಿಕೆಟ್​ ಆಡದ ಕಾರಣ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್​​​ ಬಿಸಿಸಿಐ ಕೇಂದ್ರ ಒಪ್ಪಂದ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎನ್ನಲಾಗಿದೆ.

Advertisement
Tags :
Advertisement