ಕಾಂಗ್ರೆಸ್ ನ್ಯೂ ಮುಸ್ಲಿಂ ಲೀಗ್ ಪಾರ್ಟಿ ಎಂಬಂತೆ ಆಗಿದೆ: ರಾಜ್ಯ ಬಿಜೆಪಿ ಮುಖ್ಯ ವಕ್ತಾರ
ನಗರದಲ್ಲಿಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಅಶ್ವತ್ಥ ನಾರಾಯಣ ಪತ್ರಿಕಾಗೋಷ್ಠಿ ನಡೆಸಿದ್ದಾರೆ.
06:11 PM Apr 08, 2024 IST
|
Ashitha S
ಮಂಗಳೂರು: ನಗರದಲ್ಲಿಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಅಶ್ವತ್ಥ ನಾರಾಯಣ ಪತ್ರಿಕಾಗೋಷ್ಠಿ ನಡೆಸಿದ್ದಾರೆ.
Advertisement
ಪತ್ರಿಕಾಗೋಷ್ಠಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಆಡಳಿತ ವಿರೋಧಿ ಅಲೆಯಿದೆ. ಆಡಳಿತ ಪಕ್ಷದ ಹಿರಿಯ ಶಾಸಕ ಬಿ.ಆರ್.ಪಾಟೀಲ್ 18 ಶಾಸಕರ ಸಹಿ ಒಳಗೊಂಡ ಪತ್ರವೊಂದನ್ನು ಬರೆದಿದ್ದಾರೆ.
ಮಂತ್ರಿಗಳ ಬಳಿ ಕೆಲಸ ಮಾಡಿಸಿಲು ಹೋದ್ರೆ ಅಧಿಕಾರಿಗಳು ಕಮೀಷನ್ ಕೇಳ್ತಾರೆ. ಸರ್ಕಾರದ ಹಿಡಿತ ತಪ್ಪಿ ಹೋಗಿದೆ. ಈ ಬಗ್ಗೆ ಸರ್ಕಾರದ ವಿರುದ್ಧವಾಗಿ ಹೈಕಮಾಂಡ್ ಗೆ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸುಳ್ಳು ಘೋಷಣೆ ಹಾಕಿದ್ದಾರೆ. ಕಾಂಗ್ರೆಸ್ ನ್ಯೂ ಮುಸ್ಲಿಂ ಲೀಗ್ ಪಾರ್ಟಿ ಎಂಬಂತೆ ಆಗಿದೆ. 1936 ರ ಮುಸ್ಲಿಂ ಲೀಗ್ ನ ಪ್ರಣಾಳಿಕೆ ಇವತ್ತಿನ ಕಾಂಗ್ರೆಸ್ ನ ಪ್ರಣಾಳಿಕೆ ಒಂದೇ ರೀತಿ ಇದೆ ಎಂದರು.
Advertisement
Advertisement
Next Article