For the best experience, open
https://m.newskannada.com
on your mobile browser.
Advertisement

ಕೊಟ್ಟ ಹಣ ವಾಪಸ್‌ ಕೇಳಿದ್ದಕ್ಕೆ ಚಾಕುವಿನಿಂದ ಇರಿದು ಕೊಲೆ

ಕೊಟ್ಟ ಹಣ ವಾಪಸ್‌ ಕೇಳಿದಕ್ಕೆ ಅಟ್ಟಾಡಿಸಿ ಚೂರಿ ಇರಿದು ಕೊಂದಿರುವ ಘಟನೆ ಬೆಂಗಳೂರು ಹೊರವಲಯ ಬನ್ನೇರುಘಟ್ಟ ಸಮೀಪದ ಕಲ್ಕೆರೆಯಲ್ಲಿ ನಡೆದಿದೆ.ನವೀನ್ ಅಲಿಯಾಸ್ ಅಪ್ಪು ಕೊಲೆಯಾದ ವ್ಯಕ್ತಿ.ವರುಣ್ ಹಲ್ಲೆ ಮಾಡಿದವನು.
05:55 PM Apr 14, 2024 IST | Nisarga K
ಕೊಟ್ಟ ಹಣ ವಾಪಸ್‌ ಕೇಳಿದ್ದಕ್ಕೆ ಚಾಕುವಿನಿಂದ ಇರಿದು ಕೊಲೆ
ಕೊಟ್ಟ ಹಣ ವಾಪಸ್‌ ಕೇಳಿದ್ದಕ್ಕೆ ಚಾಕುವಿನಿಂದ ಇರಿದು ಕೊಲೆ

ಬೆಂಗಳೂರು: ಕೊಟ್ಟ ಹಣ ವಾಪಸ್‌ ಕೇಳಿದಕ್ಕೆ ಅಟ್ಟಾಡಿಸಿ ಚೂರಿ ಇರಿದು ಕೊಂದಿರುವ ಘಟನೆ ಬೆಂಗಳೂರು ಹೊರವಲಯ ಬನ್ನೇರುಘಟ್ಟ ಸಮೀಪದ ಕಲ್ಕೆರೆಯಲ್ಲಿ ನಡೆದಿದೆ.ನವೀನ್ ಅಲಿಯಾಸ್ ಅಪ್ಪು ಕೊಲೆಯಾದ ವ್ಯಕ್ತಿ.ವರುಣ್ ಹಲ್ಲೆ ಮಾಡಿದವನು.

Advertisement

ನವೀನ್‌ ಹಾಗೂ ವರುಣ್‌ ಇಬ್ಬರು ಚಿರಪರಿಚಿತರೇ. ಇವರಿಬ್ಬರ ನಡುವೆ ಇತ್ತೀಚೆಗೆ ಹದಿನೈದು ಸಾವಿರ ಹಣಕ್ಕೆ ಕಿರಿಕ್ ಆಗಿತ್ತು. ನವೀನ್‌ ಬಳಿ ಈ ವರುಣ್‌ ಸಾಲ ಪಡೆದಿದ್ದ. ಹೀಗಾಗಿ ತಾನು ನೀಡಿದ್ದ ಹದಿನೈದು ಸಾವಿರ ಹಣವನ್ನು ವಾಪಸ್‌ ಕೇಳಿದ್ದಕ್ಕೆ ವರುಣ್ ಸಿಟ್ಟಾಗಿದ್ದ.

ಇದೇ ವಿಚಾರಕ್ಕೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ನವೀನ್‌ ಮೇಲೆ ಏಕಾಏಕಿ ವರುಣ್‌ ಅಟ್ಯಾಕ್ ಮಾಡಿದ್ದಾನೆ. ರಸ್ತೆಯುದ್ದಕ್ಕೂ ಅಟ್ಟಾಡಿಸಿಕೊಂಡು ಬಂದು ಚಾಕುವಿನಿಂದ ಇರಿದಿದ್ದಾನೆ. ಚಾಕುವಿನಿಂದ ಇರಿದು ಹಲ್ಲೆ ಮಾಡುತ್ತಿರುವ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Advertisement

Advertisement
Tags :
Advertisement