ಮುರುಘಾಮಠದ ಎಸ್ಜೆಎಂ ವಿದ್ಯಾಪೀಠದ ಸಿಇಒಗೆ ಮುರುಘಾಶ್ರೀ ಗೇಟ್ಪಾಸ್
ಮುರುಘಾಮಠದ ಎಸ್ಜೆಎಂ ವಿದ್ಯಾಪೀಠದ ಸಿಇಒಗೆ ಮುರುಘಾಶ್ರೀ ಗೇಟ್ಪಾಸ್ ಕೊಟ್ಟಿದ್ದಾರೆ. ಚಿತ್ರದುರ್ಗದ ಮುರುಘಾಮಠದ ಎಸ್ಜೆಎಂ ವಿದ್ಯಾಪೀಠದ ಸಿಇಒ ಆಗಿದ್ದ ಎಂ.ಭರತ್ ಕುಮಾರ್ ಅವರನ್ನು ತಗೆಯಲಾಗಿ ಮಠದ ಪೀಠಾಧ್ಯಕ್ಷರಾದ ಡಾ.ಶಿವಮೂರ್ತಿ ಮುರುಘಾ ಶರಣರು ಆದೇಶಿಸಿದ್ದಾರೆ.
08:59 PM Dec 08, 2023 IST | Ashitha S
ಚಿತ್ರದುರ್ಗ: ಮುರುಘಾಮಠದ ಎಸ್ಜೆಎಂ ವಿದ್ಯಾಪೀಠದ ಸಿಇಒಗೆ ಮುರುಘಾಶ್ರೀ ಗೇಟ್ಪಾಸ್ ಕೊಟ್ಟಿದ್ದಾರೆ. ಚಿತ್ರದುರ್ಗದ ಮುರುಘಾಮಠದ ಎಸ್ಜೆಎಂ ವಿದ್ಯಾಪೀಠದ ಸಿಇಒ ಆಗಿದ್ದ ಎಂ.ಭರತ್ ಕುಮಾರ್ ಅವರನ್ನು ತಗೆಯಲಾಗಿ ಮಠದ ಪೀಠಾಧ್ಯಕ್ಷರಾದ ಡಾ.ಶಿವಮೂರ್ತಿ ಮುರುಘಾ ಶರಣರು ಆದೇಶಿಸಿದ್ದಾರೆ.
Advertisement
ನಿನ್ನೆಯಷ್ಟೇ ಮುರುಘಾಶ್ರೀ, ಮಠದ ಆಡಳಿತಾಧಿಕಾರ ಸ್ವೀಕರಿಸಿದ್ದರು. ಇದರ ಬೆನ್ನಲ್ಲೇ ಇದೀಗ ವಿದ್ಯಾಪೀಠದ ಸಿಇಒ ಕೆಲಸದಿಂದ ಭರತ್ ಅವರನ್ನು ಬಿಡುಗಡೆಗೊಳಿಸಿದ್ದಾರೆ.
ಮುರುಘಾಶ್ರೀ ಕಾರಾಗೃಹದಲ್ಲಿದ್ದಾಗ ಅವರನ್ನು ಹೊರಗಿಟ್ಟು SJM ವಿದ್ಯಾಪೀಠಕ್ಕೆ ನೂತನ ಸಮಿತಿ ರಚಿಸಿ ಭರತ್ ಕುಮಾರ್ ರಿನಿವಲ್ ಮಾಡಿದ್ದರು. ಇದೀಗ ಮುರುಘಾಶ್ರೀ ಮಠದ ಆಡಳಿತ ಹಿಡಿಯುತ್ತಿದ್ದಂತೆ ಅಧಿಕಾರದಿಂದ ಭರತ್ಗೆ ಗೇಟ್ಪಾಸ್ ಕೊಟ್ಟಿದ್ದಾರೆ.
Advertisement
Advertisement