ಉಡುಪಿ: ಅನಧಿಕೃತ ಬೈಕ್ ಮತ್ತು ಕಾರ್ ರೆಂಟಲ್ ಮಳಿಗೆಗಳ ಮೇಲೆ ಆರ್ ಟಿಓ ಅಧಿಕಾರಿಗಳ ದಾಳಿ
ಉಡುಪಿ ಹಾಗೂ ಮಣಿಪಾಲ ನಗರ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮಾಡುತ್ತಿದ್ದ ಅನಧಿಕೃತ ರೆಂಟಲ್ ಬೈಕ್ ಮತ್ತು ಕಾರು ಮಳಿಗೆಗಳ ಮೇಲೆ ಶಿವಮೊಗ್ಗ ವಿಭಾಗದ ಜಂಟಿ ಸಾರಿಗೆ ಆಯುಕ್ತ ಕೆ.ಟಿ.ಹಾಲಸ್ವಾಮಿ ನೇತೃತ್ವದಲ್ಲಿ ಆರ್ಟಿಓ ಮತ್ತು ಮೋಟಾರು ವಾಹನ ನಿರೀಕ್ಷಕರು ದಾಳಿ ನಡೆಸಿ 10ರಿಂದ 15 ರೆಂಟ್ ಕಾರುಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
09:18 PM Feb 08, 2024 IST
|
Gayathri SG
ಉಡುಪಿ: ಉಡುಪಿ ಹಾಗೂ ಮಣಿಪಾಲ ನಗರ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮಾಡುತ್ತಿದ್ದ ಅನಧಿಕೃತ ರೆಂಟಲ್ ಬೈಕ್ ಮತ್ತು ಕಾರು ಮಳಿಗೆಗಳ ಮೇಲೆ ಶಿವಮೊಗ್ಗ ವಿಭಾಗದ ಜಂಟಿ ಸಾರಿಗೆ ಆಯುಕ್ತ ಕೆ.ಟಿ.ಹಾಲಸ್ವಾಮಿ ನೇತೃತ್ವದಲ್ಲಿ ಆರ್ಟಿಓ ಮತ್ತು ಮೋಟಾರು ವಾಹನ ನಿರೀಕ್ಷಕರು ದಾಳಿ ನಡೆಸಿ 10ರಿಂದ 15 ರೆಂಟ್ ಕಾರುಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
Advertisement
ಉಡುಪಿ ಹಾಗೂ ಮಣಿಪಾಲ ನಗರ ಪ್ರದೇಶದ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ What U Want, S.G.Riders, R.N.R. Rental Bike, City Rental Bike ಬಗ್ಗೆ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಅನಧಿಕೃತವಾಗಿ ತೆರೆದಿದ್ದ City Rental Bike & R.N.R. Rental Bike ರೆಂಟಲ್ ಮಳಿಗೆಗಳನ್ನು ಮುಚ್ಚಿ, ಅನಧಿಕೃತವಾಗಿ ಕಾರ್ಯಾಚರಣೆ ಮಾಡುತ್ತಿದ್ದ ಸುಮಾರು 10ರಿಂದ 15 ರೆಂಟ್ ಕಾರ್ ಗಳನ್ನು ತಪಾಸಣೆ ಮಾಡಿ ಮುಟ್ಟುಗೋಲು ಹಾಕಿಕೊಂಡು ಸೂಕ್ತ ಕಾನೂನು ಕ್ರಮ ಕೈಗೊಂಡು ಎಚ್ಚರಿಕೆ ನೀಡಿದ್ದಾರೆ.
Advertisement
Advertisement
Next Article