ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪ್ರತಿ ಟಿಕೆಟ್​ನ 5 ರೂಪಾಯಿ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ: ‘ಹನುಮಾನ್' ಚಿತ್ರತಂಡ

ಪ್ರಶಾಂತ್ ವರ್ಮ ಅವರು ನಿರ್ದೇಶನ ಮಾಡುತ್ತಿರುವ, ತೇಜ್ ಸಜ್ಜಾ ಅವರು ನಟಿಸುತ್ತಿರುವ ತೆಲುಗಿನ ‘ಹನುಮಾನ್’ ಸಿನಿಮಾ  ಸಾಕಷ್ಟು ನಿರೀಕ್ಷೆ ಮೂಡಿಸಿದೆ.
04:03 PM Jan 08, 2024 IST | Ashika S

ಬೆಂಗಳೂರು:  ಪೌರಾಣಿಕ ಹಾಗೂ ಆಧುನಿಕ ಕಥೆಗಳ ಸಮ್ಮಿಶ್ರಣದಲ್ಲಿ ಮೂಡಿ ಬರಲಿರುವ  ‘ಹನುಮಾನ್’ ಚಿತ್ರದ ಪ್ರತಿ ಟಿಕೆಟ್​ನ ಐದು ರೂಪಾಯಿಯನ್ನು ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಲು ತಂಡ ಮುಂದಾಗಿದೆ.

Advertisement

ಪ್ರಶಾಂತ್ ವರ್ಮ ಅವರು ನಿರ್ದೇಶನ ಮಾಡುತ್ತಿರುವ, ತೇಜ್ ಸಜ್ಜಾ ಅವರು ನಟಿಸುತ್ತಿರುವ ತೆಲುಗಿನ ‘ಹನುಮಾನ್’ ಸಿನಿಮಾ  ಸಾಕಷ್ಟು ನಿರೀಕ್ಷೆ ಮೂಡಿಸಿದೆ.

ಈ ಚಿತ್ರ ಜನವರಿ 12ರಂದು ರಿಲೀಸ್ ಆಗಲಿದೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ.

Advertisement

ಹನುಮಂತನ ಪಾತ್ರವನ್ನು ಸ್ಫೂರ್ತಿಯಾಗಿ ಇಟ್ಟುಕೊಂಡು ಕಥೆಗೆ ಆಧುನಿಕ ಟಚ್ ನೀಡಿ ‘ಹನುಮಾನ್’ ಸಿನಿಮಾ ಮಾಡಿದ್ದಾರೆ. ಈ ಚಿತ್ರಕ್ಕೆ ಭರ್ಜರಿ ಪ್ರಚಾರ ಮಾಡಲಾಗುತ್ತಿದೆ.

ವಿನಯ್ ರಾಯ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅಮೃತಾ ಅಯ್ಯರ್, ವರಲಕ್ಷ್ಮೀ ಶರತ್​ಕುಮಾರ್, ರಾಜ್​ ದೀಪಕ್ ಶೆಟ್ಟಿ ಮೊದಲಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗು ಮಾತ್ರವಲ್ಲದೆ ಕನ್ನಡ ಮೊದಲಾದ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.

ಜನವರಿ 7ರಂದು ಅದ್ದೂರಿಯಾಗಿ ‘ಹನುಮಾನ್’ ಸಿನಿಮಾದ ಪ್ರೀರಿಲೀಸ್ ಇವೆಂಟ್ ನಡೆಯಿತು. ಚಿರಂಜೀವಿ ಅವರು ಈ ಕಾರ್ಯಕ್ರಮದ ಮುಖ್ಯ ಅತಿಥಿ ಆಗಿ ಆಗಮಿಸಿದ್ದರು. ಅವರು ಜನರನ್ನು ಉದ್ದೇಶಿಸಿ ಮಾತನಾಡುವಾಗ ಪ್ರಮುಖ ವಿಚಾರ ಬಿಚ್ಚಿಟ್ಟರು. ‘ತಮ್ಮ ಚಿತ್ರದ ಪ್ರತಿ ಟಿಕೆಟ್‌ನಿಂದ 5 ರೂಪಾಯಿಯನ್ನು ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಲು ಹನುಮಾನ್ ತಂಡ ನಿರ್ಧರಿಸಿದ್ದಾರೆ. ಚಿತ್ರಕ್ಕೆ ಒಳ್ಳೆಯದಾಗಲಿ’ ಎಂದರು.

Advertisement
Tags :
‘ಹನುಮಾನ್’LatetsNewsNewsKannadaತೇಜ್ ಸಜ್ಜಾದೇಣಿಗೆಪ್ರಶಾಂತ್ ವರ್ಮಸಿನಿಮಾ
Advertisement
Next Article