ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಸೀತಾಫಲ ಬೆಳೆಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

ಸಕ್ಕರೆ ಸೇಬು ಎಂದು ಕರೆಯಲ್ಪಡುವ ಸೀತಾಫಲವು ಭಾರತದಲ್ಲಿ ಸಿಗುವ ರುಚಿಕರವಾದ ಹಣ್ಣುಗಳಲ್ಲಿ ಒಂದು. ಅನೋನಾಸಿ ಕುಟುಂಬಕ್ಕೆ ಸೇರಿದ ಈ ಹಣ್ಣನ್ನು ಆಂಗ್ಲ ಭಾಷೆಯಲ್ಲಿ ಕಸ್ಟರ್ಡ್ ಆಪಲ್ ಎಂದು ಕರೆಯುತ್ತಾರೆ. ಹೃದಯಕಾರವಾಗಿರೋ ಈ ಹಣ್ಣು ಹಳದಿ ಅಥವಾ ಹಸಿರು ಬಣ್ಣವನ್ನು ಹೊಂದಿದ್ದು ಇದರಲ್ಲಿ ಹೇರಳವಾಗಿ ವಿಟಮಿನ್ ಸಿ ಮ್ಯಾಂಗನೀಸ್ ಕಬ್ಬಿಣ ಮತ್ತು ಪೊಟ್ಯಾಸಿಯಂ ತುಂಬಿಕೊಂಡಿದೆ.
11:00 AM Jan 18, 2024 IST | Ashika S

ಸಕ್ಕರೆ ಸೇಬು ಎಂದು ಕರೆಯಲ್ಪಡುವ ಸೀತಾಫಲವು ಭಾರತದಲ್ಲಿ ಸಿಗುವ ರುಚಿಕರವಾದ ಹಣ್ಣುಗಳಲ್ಲಿ ಒಂದು. ಅನೋನಾಸಿ ಕುಟುಂಬಕ್ಕೆ ಸೇರಿದ ಈ ಹಣ್ಣನ್ನು ಆಂಗ್ಲ ಭಾಷೆಯಲ್ಲಿ ಕಸ್ಟರ್ಡ್ ಆಪಲ್ ಎಂದು ಕರೆಯುತ್ತಾರೆ. ಹೃದಯಕಾರವಾಗಿರೋ ಈ ಹಣ್ಣು ಹಳದಿ ಅಥವಾ ಹಸಿರು ಬಣ್ಣವನ್ನು ಹೊಂದಿದ್ದು ಇದರಲ್ಲಿ ಹೇರಳವಾಗಿ ವಿಟಮಿನ್ ಸಿ ಮ್ಯಾಂಗನೀಸ್ ಕಬ್ಬಿಣ ಮತ್ತು ಪೊಟ್ಯಾಸಿಯಂ ತುಂಬಿಕೊಂಡಿದೆ.

Advertisement

ಈ ಹಣ್ಣು ತಿನ್ನಲು ರುಚಿಕರವಷ್ಟೇ ಅಲ್ಲದೆ ಇದರ ಎಲೆಯಲ್ಲಿ ಬಹಳಷ್ಟು ಆರೋಗ್ಯಕರ ಔಷಧೀಯ ಗುಣಗಳು ಸಹ ಇದೆ.

ಸೀತಾಫಲ ಬೆಳಿಗ್ಗೆ ಹವಾಮಾನ ಪರಿಸ್ಥಿತಿ: ಸೀತಾಫಲ ಶುಷ್ಕ ಮತ್ತು ಬಿಸಿ ವಾತಾವರಣದಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಇದಕ್ಕೆ ಹಗುರವಾದ ಮಣ್ಣು ಬೇಕು ಮತ್ತು ಸಾಮಾನ್ಯವಾಗಿ ಬೆಟ್ಟಗಳ ಇಳಿಜಾರಿನಲ್ಲಿ ಬಳಸಲಾಗುತ್ತದೆ. ಸಸಿ ಬೀಜಗಳಿಂದ ಬೆಳೆದು ಸುಮಾರು ಮೂರರಿಂದ ನಾಲ್ಕು ವರ್ಷಗಳಲ್ಲಿ ಫಲವನ್ನು ನೀಡುತ್ತದೆ.

Advertisement

ಈ ಸಸ್ಯವು ಏಪ್ರಿಲ್ ನಿಂದ ಮೇ ವರೆಗೆ ಮತ್ತು ಆಗಸ್ಟ್ ನಿಂದ ನವೆಂಬರ್ ನಡುವೆ ಫಲ ನೀಡುತ್ತದೆ. ಸೀತಾಫಲವನ್ನು ವಾಣಿಜ್ಯ ಉತ್ಪಾದನೆಗಾಗಿ ಸೀಮಿತಗೊಳಿಸಲು ಹವಾಮಾನ ಅಂಶಗಳು ತಾಪಮಾನ ಮತ್ತು ತೇವಾಂಶಗಳು ಪ್ರಮುಖವಾಗಿರುತ್ತದೆ.

ಸೀತಾಫಲ ಬೆಳಿಗ್ಗೆ ಮಣ್ಣಿನ ಫಲವತ್ತತೆ: ಸೀತಾಫಲ ಮರಳು ಮಿಶ್ರಿತ ಲೋಮ್ ಮಣ್ಣಿನಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಮರೆತ ಬೇರುಗಳು ಹೆಚ್ಚಾಗಿ ಆಳವಿಲ್ಲದಿದ್ದರೂ ಬೇರು ಕೊಳೆತವನ್ನು ತಪ್ಪಿಸಲು ಮತ್ತು ಮರದ ಕಾರ್ಯಕ್ಷಮತೆಯನ್ನು ಖಚಿತಪಡಿಸಿಕೊಳ್ಳಲು ಜೇಡಿ ಮಣ್ಣು ಅಥವಾ ಬಂಡೆಕಲ್ಲುಗಳಿಲ್ಲದ ಬರಿದು ಹೋದ ಮಣ್ಣು ಬೇಕಾಗುತ್ತದೆ. ತೀರಾ ಕಳಪೆ ಮಟ್ಟದ ಮಣ್ಣಿನಲ್ಲಿ ಸೀತಾಫಲವು ರೋಗಕ್ಕೆ ಒಳಗಾಗುವ ಅಪಾಯ ಹೆಚ್ಚಾಗಿರುತ್ತದೆ.

ಸೀತಾಫಲ ಬೆಳೆಯಲು ನೀರಿನ ಅವಶ್ಯಕತೆ: ಸೀತಾಫಲ ಬೆಳೆಯಲು ಬೆಳವಣಿಗೆಯ ಉದ್ದಕ್ಕೂ ಏಕರೂಪದ ಮಣ್ಣಿನ ತೇವಾಂಶವು ಬೇಕಾಗುತ್ತದೆ. ಉತ್ತಮ ಗುಣಮಟ್ಟದ ಇಳುವರಿಯನ್ನು ಪಡೆಯಲು ನೀರಾವರಿಯ ಅಗತ್ಯ ಹೆಚ್ಚಾಗಿರುತ್ತದೆ. ಉತ್ತಮ ಹಣ್ಣಿನ ಗುಣಮಟ್ಟವನ್ನು ಸಾಧಿಸಲು ಹೂ ಬಿಡುವ ಮತ್ತು ಹಣ್ಣಿನ ಬೆಳವಣಿಗೆ ಸಮಯದಲ್ಲಿ ಸಸ್ಯಗಳಿಗೆ ನೀರುಣಿಸುವುದು ಅತ್ಯಗತ್ಯ. ಹೆಚ್ಚಿನ ನೀರನ್ನು ದಯಮಾಡುವ ಬದಲು ಹನಿ ನೀರಾವರಿ ಪದ್ಧತಿಯನ್ನು ಸೀತಾಫಲ ಬೆಳಿಗ್ಗೆ ಬಳಸಬಹುದು. ಸೀತಾಫಲವನ್ನ ನಾಟಿ ಮಾಡಿದ ಮೂರು ವರ್ಷಗಳ ನಂತರ ಇದು ಫಸಲು ನೀಡಲು ಆರಂಭಿಸುತ್ತದೆ.

ಸೀತಾಫಲ ಕೃಷಿಯನ್ನು ಕಡಿಮೆ ಹೂಡಿಕೆ ಮಾಡಿ ಉತ್ತಮ ಲಾಭದಾಯಕ ಬೆಳೆಯಾಗಿ ಬೆಳೆಸಬಹುದಾಗಿದೆ.

ಸೀತಾಫಲದಿಂದ ಆರೋಗ್ಯ ಪ್ರಯೋಜನಗಳು: ಅನೇಕ ರೋಗಗಳಿಂದ ರಕ್ಷಣೆ ಸೀತಾಫಲ ಉತ್ತಮವಾದ ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದು ಹೃದಯ ಮತ್ತು ಕಣ್ಣುಗಳನ್ನು ಆರೋಗ್ಯದಿಂದಿರಿಸುತ್ತದೆ ಹಾಗೂ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಸಹ ತಡೆಯುತ್ತದೆ.

ಅಧಿಕಾರಕ್ಕೆ ಒತ್ತಡವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ

ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ

ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ

ಅಸ್ತಮಾ ರೋಗ ಬರದಂತೆ ತಡೆಯುತ್ತದೆ

ಎದೆಯ ಗಾದೆಯಿಂದ ಹೃದಯವನ್ನು ರಕ್ಷಿಸುತ್ತದೆ

Advertisement
Tags :
LatestNewsNewsKannadaಅನೋನಾಸಿಕಸ್ಟರ್ಡ್ ಆಪಲ್ಸಕ್ಕರೆ ಸೇಬುಸೀತಾಫಲಹಣ್ಣು
Advertisement
Next Article