For the best experience, open
https://m.newskannada.com
on your mobile browser.
Advertisement

ಸಿಟ್ಟಿನಲ್ಲಿ ಕಪಾಳ ಮೋಕ್ಷ: ವ್ಯಕ್ತಿ ಮೃತ್ಯು

ಗಲಾಟೆಯಲ್ಲಿ ವ್ಯಕ್ತಿಯೊಬ್ಬ ಸಿಟ್ಟಾಗಿ ಕಪಾಳಕ್ಕೆ ಹೊಡೆದಿದ್ದರಿಂದ ಮೃತಪಟ್ಟ ಘಟನೆ ಬೆಂಗಳೂರಿನ ಕಾಡುಗೋಡಿ ಠಾಣಾ ವ್ಯಾಪ್ತಿಯ ಬೆಳ್ತೂರು ಕಾಲೋನಿಯಲ್ಲಿ ನಡೆದಿದೆ.
03:32 PM May 06, 2024 IST | Chaitra Kulal
ಸಿಟ್ಟಿನಲ್ಲಿ ಕಪಾಳ ಮೋಕ್ಷ  ವ್ಯಕ್ತಿ ಮೃತ್ಯು

ಬೆಂಗಳೂರು: ಗಲಾಟೆಯಲ್ಲಿ ವ್ಯಕ್ತಿಯೊಬ್ಬ ಸಿಟ್ಟಾಗಿ ಕಪಾಳಕ್ಕೆ ಹೊಡೆದಿದ್ದರಿಂದ ಮೃತಪಟ್ಟ ಘಟನೆ ಬೆಂಗಳೂರಿನ ಕಾಡುಗೋಡಿ ಠಾಣಾ ವ್ಯಾಪ್ತಿಯ ಬೆಳ್ತೂರು ಕಾಲೋನಿಯಲ್ಲಿ ನಡೆದಿದೆ.

Advertisement

ಪ್ರಭುರಾಮ್ ಪ್ರಸಾದ್ (33) ಮೃತ ದುರ್ದೈವಿ. ನಿನ್ನೆ ಭಾನುವಾರ ರಾತ್ರಿ ಪ್ರಭುರಾಮ್‌ ಹಬ್ಬಕ್ಕೆಂದು ಮಗನ ಜತೆ ಬೈಕ್‌ನಲ್ಲಿ ದೇಗುಲದ ಬಳಿ ಹೋಗಿದ್ದರು. ದಾರಿ ಮಧ್ಯೆ ಬರುವಾಗ ಸ್ಕೂಟರ್‌ನಲ್ಲಿ ಏನೋ ಸೌಂಡ್ ಬರುತ್ತಿದೆ ಎಂದು ಸೈಡ್‌ಗೆ ನಿಲ್ಲಿಸಿ, ಪರಿಶೀಲಿಸುತ್ತಿದ್ದರು. ಇದೇ ವೇಳೆ ಅದೇ ದಾರಿಯಲ್ಲಿ ಕಾರಿನಲ್ಲಿ ಬಂದ ಪರಿಚಯಸ್ಥ ಮಹಿಳೆ ಬೈಕ್‌ಗೆ ಟಚ್ ಮಾಡಿದ್ದಾಳೆ.

ಈ ಬಗ್ಗೆ ಪ್ರಭುರಾಮ್‌ ಪ್ರಶ್ನೆ ಮಾಡಿದ್ದಕ್ಕೆ ಮನೆ ಹತ್ರ ಬಾ ಎಂದು ಹೊರಟು ಹೋಗಿದ್ದಾಳೆ. ಬಳಿಕ ಮನೆ ಬಳಿ ಹೋದಾಗ ಮಹಿಳೆಯ ಪತಿ ಅನಿಲ್ ಎಂಬಾತ ಪ್ರಭುರಾಮ್‌ ಜತೆಗೆ ಜಗಳ ತೆಗೆದಿದ್ದಾನೆ. ಈ ವೇಳೆ ಪ್ರಭುರಾಮ್ ಕೆನ್ನೆಗೆ ಅನಿಲ್‌ 4-5 ಬಾರಿ ಬಲವಾಗಿ ಹೊಡೆದಿದ್ದಾನೆ. ಜಗಳದ ಬಳಿಕ ಮನೆಗೆ ಹೋದ ಪ್ರಭು ನೋವಿನಲ್ಲೇ ಮಲಗಿದ್ದಾನೆ. ಆದರೆ ರಾತ್ರಿ 1 ಗಂಟೆ ಸುಮಾರಿಗೆ ಮಲಗಿದ್ದಲ್ಲೇ ಮೃತಪಟ್ಟಿದ್ದಾನೆ.

Advertisement

ಪ್ರಭುರಾಮ್ ತಾಯಿ ಪ್ರಕರಣ ಸಂಬಂಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

Advertisement
Tags :
Advertisement