ಶ್ರೀಶೈಲಂ ದೇವಸ್ಥಾನದ ಪ್ರಸಾದದಲ್ಲಿ ಚಿಕನ್ ಮೂಳೆ ಪತ್ತೆ
ಶ್ರೀ ಬ್ರಮರಾಂಭ ಮಲ್ಲಿಕಾರ್ಜುನ ದೇವಸ್ಥಾನ ಅಥವಾ ಶ್ರೀಶೈಲಂ ದೇವಸ್ಥಾನಕ್ಕೆ ಹೈದರಾಬಾದ್ನಿಂದ ಬಂದಿದ್ದ ಹರೀಶ್ ರೆಡ್ಡಿ ಎಂಬ ವ್ಯಕ್ತಿಗೆ ದೇವರ ಪ್ರಸಾದದಲ್ಲಿ ಚಿಕನ್ ಮೂಳೆ ಸಿಕ್ಕಿದೆ.
05:59 PM Feb 11, 2024 IST
|
Gayathri SG
ಶ್ರೀಶೈಲಂ: ಶ್ರೀ ಬ್ರಮರಾಂಭ ಮಲ್ಲಿಕಾರ್ಜುನ ದೇವಸ್ಥಾನ ಅಥವಾ ಶ್ರೀಶೈಲಂ ದೇವಸ್ಥಾನಕ್ಕೆ ಹೈದರಾಬಾದ್ನಿಂದ ಬಂದಿದ್ದ ಹರೀಶ್ ರೆಡ್ಡಿ ಎಂಬ ವ್ಯಕ್ತಿಗೆ ದೇವರ ಪ್ರಸಾದದಲ್ಲಿ ಚಿಕನ್ ಮೂಳೆ ಸಿಕ್ಕಿದೆ.
Advertisement
ಮಲ್ಲಿಕಾರ್ಜುನನ ದರ್ಶನ ಪಡೆದ ಹರೀಶ್ ರೆಡ್ಡಿ, ಪ್ರಸಾದ ಸ್ವೀಕರಿಸಿದ್ದಾರೆ. ಆದರೆ ಪ್ರಸಾದವನ್ನು ಸೇವಿಸುವ ವೇಳೆ ಮೂಳೆ ಪತ್ತೆಯಾಗಿದೆ. ಎರಡು ಸಣ್ಣ ಮೂಳೆಗಳು ಪ್ರಸಾದಲ್ಲಿ ಸಿಕ್ಕವೆ. ಇದು ಹರೀಶ್ ರೆಡ್ಡಿ ಹಾಗೂ ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಲಿಖಿತ ದೂರು ನೀಡಿದ್ದಾರೆ. ಇಷ್ಟೇ ಅಲ್ಲ ಹಿಂದೂ ದೇವಸ್ಥಾನಗಳ ಪಾವಿತ್ರ್ಯತೆ ಕಾಪಾಡಿಕೊಳ್ಳಲು ಆಗ್ರಹಿಸಿದ್ದಾರೆ.
ದೂರು ಸ್ವೀಕರಿಸಿರುವ ದೇವಸ್ಥಾನ ಆಡಳಿತ ಮಂಡಳಿ ತನಿಖೆ ನಡೆಸುವುದಾಗಿ ಭರವಸೆ ನೀಡಿದೆ.
Advertisement
Advertisement
Next Article