ರಾಜ್ಯಸಭಾ ಸದಸ್ಯೆಯಾಗಿ ಕನ್ನಡದಲ್ಲೇ ಪ್ರಮಾಣ ವಚನ ಸ್ವಿಕರಿಸಿದ ಸುಧಾಮೂರ್ತಿ
ದೆಹಲಿ: ಇನ್ಫೋಸಿಸ್ ಫೌಂಡೇಶನ್ನ ಮುಖ್ಯಸ್ಥೆ, ಲೇಖಕಿ, ಸಮಾಜ ಸೇವಕಿ ಸುಧಾಮೂರ್ತಿ ಅವರಿಂದು ರಾಜ್ಯಸಭಾ ಸದಸ್ಯೆಯಾಗಿ ಪ್ರಮಾಣ ವಚನ ಮಾಡಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಸುಧಾಮೂರ್ತಿಯವರು ಕನ್ನಡದಲ್ಲೇ ಪ್ರಮಾಣ ವಚನವನ್ನು ಮಾಡಿದ್ದು, ಅವರ ಪ್ರಮಾಣ ವಚನದ ದೃಶ್ಯ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ.
ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ಸಮ್ಮುಖದಲ್ಲಿ ಸುಧಾಮೂರ್ತಿ ಪ್ರಮಾಣ ವಚನ ಮಾಡಿದ್ದಾರೆ. ಈ ವೇಳೆ ಸುಧಾಮೂರ್ತಿ ಪತಿ ನಾರಾಯಣ ಮೂರ್ತಿ, ನಂದನ್ ನೀಲಕೇಣಿ ಹಾಗೂ ಕೇಂದ್ರ ಸಚಿವ ಪಿಯುಷ್ ಗೋಯಲ್ ಹಾಜರಿದ್ದರು.
ಕೆಲ ದಿನಗಳ ಹಿಂದೆ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರಿಂದ ರಾಜ್ಯಸಭೆಯ ಸದಸ್ಯೆಯಾಗಿ ಸುಧಾಮೂರ್ತಿ ನಾಮನಿರ್ದೇಶನಗೊಂಡರು.
ತಮ್ಮ ಧರ್ಮ ಕಾರ್ಯದ ಮೂಲಕ ಜನರಿಗೆ ಸ್ಫೂರ್ತಿಯಾಗಿರುವ ಮಹಿಳೆ ಇಂದು ನಮ್ಮ ಮಾತೃ ಭಾಷೆ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಜನರ ಮನಸ್ಸನ್ನು ಮತ್ತೊಮ್ಮೆ ಗೆದ್ದಿದ್ದಾರೆ. ನಿಮಗೆ ಕೋಟಿ ಕೋಟಿ ಪ್ರಣಾಮಗಳು...@SmtSudhaMurty pic.twitter.com/la9mrGosau
— Pralhad Joshi (Modi Ka Parivar) (@JoshiPralhad) March 14, 2024