ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಅವರ ಆಸೆ ಈಡೇರಿಸಿಲ್ಲ ಹಾಗಾಗಿ ಸಿನಿಮಾದಿಂದ ತೆಗೆದರು ಎಂದ ನಟಿ

ಕೋವಿಡ್‌ ವೇಳೆ ಕಾಸ್ಟಿಂಗ್‌ ಕೌಚ್, ಮೀಟೂ ಅಭಿಯಾನ ಜೋರಾಗಿತ್ತು. ಹಲವಾರು ನಟ, ನಟಿಯರು ತಮಗಾದ ಘೋರ ಅನುಭವಗಳನ್ನು ಹಂಚಿಕೊಂಡಿದ್ದರು. ಇದೀಗ ಮತ್ತೊಮ್ಮೆ ಈ ಕುರಿತು ಸೂಪರ್ ಮಾಡೆಲ್ ಹಾಗೂ ನಟಿ ಅದಿತಿ ಗೋವಿತ್ರಿಕರ್ ಮಾತನಾಡಿದ್ದಾರೆ.
04:11 PM Dec 06, 2023 IST | Gayathri SG

ಕೋವಿಡ್‌ ವೇಳೆ ಕಾಸ್ಟಿಂಗ್‌ ಕೌಚ್, ಮೀಟೂ ಅಭಿಯಾನ ಜೋರಾಗಿತ್ತು. ಹಲವಾರು ನಟ, ನಟಿಯರು ತಮಗಾದ ಘೋರ ಅನುಭವಗಳನ್ನು ಹಂಚಿಕೊಂಡಿದ್ದರು. ಇದೀಗ ಮತ್ತೊಮ್ಮೆ ಈ ಕುರಿತು ಸೂಪರ್ ಮಾಡೆಲ್ ಹಾಗೂ ನಟಿ ಅದಿತಿ ಗೋವಿತ್ರಿಕರ್ ಮಾತನಾಡಿದ್ದಾರೆ.

Advertisement

ಸಿದ್ದಾರ್ಥ್ ಖನ್ನಾ ಅವರ ಜೊತೆಗಿನ ಸಂದರ್ಶನದಲ್ಲಿ ಅದಿತಿ ಮಾತನಾಡಿದ್ದಾರೆ. ‘ದೊಡ್ಡ ಸಿನಿಮಾ ಶೂಟಿಂಗ್​ಗೆ ದಕ್ಷಿಣ ಆಫ್ರಿಕಾಗೆ ತೆರಳಿದ್ದೆ. ಆ ವ್ಯಕ್ತಿ ಮಾಡುತ್ತಿದ್ದ ಕೆಲವು ವರ್ತನೆಗಳ ಹಿಂದಿನ ಉದ್ದೇಶ ನನಗೆ ಗೊತ್ತಾಗಲಿಲ್ಲ. ಹೀಗಾಗಿ ನಾನು ನಕ್ಕು ಅಲ್ಲಿಂದ ನಡೆದೆ ಮತ್ತು ನೀವು ಮೂರ್ಖರಾ ಎಂದು ಕೇಳಿದೆ. ಇದು ಅವರ ಅಹಂಗೆ ಪೆಟ್ಟು ಕೊಟ್ಟಿತು. ಆ ಕ್ಷಣವೇ ಶೂಟಿಂಗ್​ ಮುಗಿಯಿತು ಎಂದರು. ಮರುದಿನ ಮುಂಬೈಗೆ ಬರಬೇಕಾಯಿತು. ಹೀಗೇಕೆ ಹೇಳಿದರು ಎಂಬುದೇ ಗೊತ್ತಾಗಿರಲಿಲ್ಲ’ ಎಂದಿದ್ದಾರೆ ಅದಿತಿ. ನಂತರ ಮತ್ತೆ ನನ್ನನ್ನು ಕರೆದರು. ನಾಲ್ಕು ದಿನದ ಶೂಟ್ ಬಾಕಿ ಇತ್ತು. ಆದರೆ, ಆ ಸಂದರ್ಭದಲ್ಲಿ ಅವರು ಬೇರೆ ಬೇರೆ ರೀತಿಯ ಕಾರಣಗಳನ್ನು ನೀಡುತ್ತಿದ್ದರು. ಆಗ ನನಗೆ ಎಲ್ಲವೂ ಅರಿವಾಯಿತು. ನಾನು ಅವರ ಆಸೆಯಂತೆ ನಡೆದುಕೊಳ್ಳಲಿಲ್ಲ, ಹೀಗಾಗಿ ಸಿನಿಮಾದಿಂದ ನನ್ನನ್ನು ತೆಗೆದರು ಅನ್ನೋದು ಅರಿವಿಗೆ ಬಂತು’ ಎಂದು ಅದಿತಿ ತಿಳಿಸಿದ್ದಾರೆ.

Advertisement
Advertisement
Tags :
LatestNewsNewsKannadaನಟಿಸಿದ್ದಾರ್ಥ್ ಖನ್ನಾಸೂಪರ್ ಮಾಡೆಲ್
Advertisement
Next Article