For the best experience, open
https://m.newskannada.com
on your mobile browser.
Advertisement

ರೈಲು ಹರಿದು ಕರ್ತವ್ಯನಿರತ ಮೂವರು ರೈಲ್ವೆ ಸಿಬ್ಬಂದಿ ಸಾವು

ಸ್ಥಳೀಯ ರೈಲೊಂದು ಹರಿದು ರೈಲ್ವೆ ಇಲಾಖೆಯ ಮೂವರು ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯ ವಸಾಯಿ ಬಳಿ ನಡೆದಿದೆ.
03:17 PM Jan 23, 2024 IST | Ramya Bolantoor
ರೈಲು ಹರಿದು ಕರ್ತವ್ಯನಿರತ ಮೂವರು ರೈಲ್ವೆ ಸಿಬ್ಬಂದಿ ಸಾವು

ಮುಂಬೈ: ಸ್ಥಳೀಯ ರೈಲೊಂದು ಹರಿದು ರೈಲ್ವೆ ಇಲಾಖೆಯ ಮೂವರು ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯ ವಸಾಯಿ ಬಳಿ ನಡೆದಿದೆ.

Advertisement

ಮೃತ ಅಧಿಕಾರಿಗಳನ್ನು ಸಿಗ್ನಲಿಂಗ್‌ ಇನ್ಸ್‌ಪೆಕ್ಟರ್‌ ವಾಸು ಮಿತ್ರ, ಎಲೆಕ್ಟ್ರಿಕಲ್‌ ಸಿಗ್ನಲಿಂಗ್‌ ಮೇಂಟೇನರ್‌ ಸೋಮನಾಥ್‌ ಉತ್ತಮ್‌ ಲಂಬುತ್ರೆ ಹಾಗೂ ಹೆಲ್ಪರ್‌ ಸಚಿನ್‌ ವಾಂಖೇಡೆ ಎಂದು ಗುರುತಿಸಲಾಗಿದೆ.

ಸೋಮವಾರ ರಾತ್ರಿ (ಜನವರಿ 22) 8.55ರ ಸುಮಾರಿಗೆ ವಸಾಯಿ ರೋಡ್‌ ಹಾಗೂ ನೈಗಾಂವ್‌ ಸ್ಟೇಷನ್‌ ಮಧ್ಯೆ ಮೂವರು ರೈಲ್ವೆ ಸಿಬ್ಬಂದಿಯು ಕಾರ್ಯನಿರ್ವಹಿಸುತ್ತಿದ್ದರು. ಸಿಗ್ನಲಿಂಗ್‌ ಸಮಸ್ಯೆಯ ಹಿನ್ನೆಲೆಯಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದರು. ಇದೇ ವೇಳೆ, ಚರ್ಚ್‌ಗೇಟ್‌ ಕಡೆ ತೆರಳುತ್ತಿದ್ದ ಸ್ಥಳೀಯ ರೈಲು ಮೂವರು ಸಿಬ್ಬಂದಿ ಮೇಲೆ ಹರಿದಿದೆ. ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Advertisement

Advertisement
Tags :
Advertisement