For the best experience, open
https://m.newskannada.com
on your mobile browser.
Advertisement

ಕುಡಿದು ಅಮಲಿನಲ್ಲಿ ಮೂವರ ಮೇಲೆ ಸ್ಟೀಲ್ ಕಟರ್‌ನಿಂದ ಇರಿತ

ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಮೂವರ ಮೇಲೆ ಸ್ಟೀಲ್ ಕಟರ್‌ನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ.
03:28 PM Jan 24, 2024 IST | Ramya Bolantoor
ಕುಡಿದು ಅಮಲಿನಲ್ಲಿ ಮೂವರ ಮೇಲೆ ಸ್ಟೀಲ್ ಕಟರ್‌ನಿಂದ ಇರಿತ

ಚಿತ್ರದುರ್ಗ:   ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಮೂವರ ಮೇಲೆ ಸ್ಟೀಲ್ ಕಟರ್‌ನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ.

Advertisement

ಗ್ರಾಮದಲ್ಲಿ ಉಡುಸಲಮ್ಮ ದೇವಿಯ ಜಾತ್ರೆ ನಡೆಯುತ್ತಿತ್ತು. ಜಾತ್ರೆಯಲ್ಲಿ ವಿರೇಶ್ ಎಂಬಾತ ಕುಡಿದು ಗಲಾಟೆ ಆರಂಭಿಸಿದ್ದು, ಕ ದೇವಾಲಯದ ಬಳಿ ಇದ್ದ ಮೂವರು ಅದೇ ಗ್ರಾಮದ ಯುವಕರಿಗೆ ಸ್ಟೀಲ್ ಇರಿದಿದ್ದಾನೆ.

ಗ್ರಾಮದ ಪವನ್, ಮಾರುತಿ ಹಾಗೂ ಮಂಜುನಾಥ್ ಎಂಬವರ ಮೇಲೆ ಹಲ್ಲೆ ನಡೆದಿದೆ.   ಹಿಂದಿನಿಂದಲೂ ವೀರೇಶ್ ಹಾಗೂ ಹಲ್ಲೆಗೊಳಗಾದ ಮೂವರು ಯುವಕರ ನಡುವೆ ಜಾತಿ ವೈಷಮ್ಯ ಇತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಸ್ಟೀಲ್ ಕಟರ್‌ನಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.     ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Advertisement
Tags :
Advertisement