For the best experience, open
https://m.newskannada.com
on your mobile browser.
Advertisement

ರಾಜಕೀಯ ನಿವೃತ್ತಿ ಸುಳಿವು ಕೊಟ್ಟ ಕೇಂದ್ರ ಸಚಿವ ನಾರಾಯಣಸ್ವಾಮಿ

ಕೇಂದ್ರ ಸಾಮಾಜಿಕ ನ್ಯಾಯ, ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಅವರು ಪರೋಕ್ಷವಾಗಿ ರಾಜಕೀಯ ನಿವೃತ್ತಿ ಸುಳಿವು ಕೊಟ್ಟಿದ್ದಾರೆ.
07:46 PM Dec 22, 2023 IST | Gayathri SG
ರಾಜಕೀಯ ನಿವೃತ್ತಿ ಸುಳಿವು ಕೊಟ್ಟ ಕೇಂದ್ರ ಸಚಿವ ನಾರಾಯಣಸ್ವಾಮಿ

ಚಿತ್ರದುರ್ಗ: ಕೇಂದ್ರ ಸಾಮಾಜಿಕ ನ್ಯಾಯ, ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಅವರು ಪರೋಕ್ಷವಾಗಿ ರಾಜಕೀಯ ನಿವೃತ್ತಿ ಸುಳಿವು ಕೊಟ್ಟಿದ್ದಾರೆ.

Advertisement

ಅವರು ಚಿತ್ರದುರ್ಗ ನಗರದ ತರಾಸು ರಂಗಮಂದಿರದಲ್ಲಿಂದ MBBS ವಿಧ್ಯಾರ್ಥಿಗಳ ವೈಟ್ ಕೋಟ್ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಇಂತಹ ಪೊಲಿಟೆಡ್ ಪಾಲಿಟಿಕ್ಸ್​ನಲ್ಲಿ ನನ್ನಂತವರು ಇರಬಾರದು ಎಂದು ತೀರ್ಮಾನ‌ ಮಾಡಿದ್ದೇನೆ ಎನ್ನುವ ಮೂಲಕ ನಿವೃತ್ತಿ ಬಗ್ಗೆ ಸುಳಿವು ಕೊಟ್ಟಿದ್ದಾರೆ.

ನಾವು ದೇಶದ ನಾಗರೀಕರ ಟ್ಯಾಕ್ಸ್ ಗೆ ಸರಿಯಾದ ಸರ್ವೀಸ್ ಕೊಡಬೇಕು. ನನ್ನ 25 ವರ್ಷದ ರಾಜಕೀಯ ಜೀವನದಲ್ಲಿ ಭ್ರಷ್ಟ ವ್ಯವಸ್ಥೆ ನೋಡಿದ್ದೇನೆ. ಇಂತಹ ಭ್ರಷ್ಟ ವ್ಯವಸ್ಥೆಯನ್ನು ಧಿಕ್ಕರಿಸಿ ರಾಜಕೀಯ ಬಿಡೋಣ ಅಂತಿದೀನಿ. ಈ ಭ್ರಷ್ಟರ ಜೊತೆ ನಾನು ಒಬ್ಬ ಆಗಬಾರದು. ನಾನು ಇವರ ಜೊತೆ ರಾಜಿ ಆಗಬಾರದು. ಇಂತಹ ಪೊಲಿಟೆಡ್ ಪಾಲಿಟಿಕ್ಸ್​ನಲ್ಲಿ ನನ್ನಂತವರು ಇರಬಾರದು ಎಂದು ತೀರ್ಮಾನ‌ ಮಾಡಿದ್ದೇನೆ ಎಂದಿದ್ದಾರೆ.

Advertisement

Advertisement
Tags :
Advertisement