For the best experience, open
https://m.newskannada.com
on your mobile browser.
Advertisement

ಕರಾವಳಿಗೂ ಕಾಲಿಟ್ಟ ವಂದೇ ಭಾರತ್‌ ರೈಲು; ವೇಳಾಪಟ್ಟಿ ಪ್ರಕಟ

ತಿರುವನಂತಪುರಂ-ಕಾಸರಗೋಡು ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್‌ ರೈಲಿನ ಸೇವೆಯನ್ನು ಮಂಗಳೂರು ಸೆಂಟ್ರಲ್‌ ನಿಲ್ದಾಣದವರೆಗೆ ವಿಸ್ತರಿಸಲಾಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಕಾನ್ಫರೆನ್ಸ್‌ ಮೂಲಕ ಮಂಗಳವಾರ ಚಾಲನೆ ನೀಡಿದರು.
08:15 PM Mar 12, 2024 IST | Maithri S
ಕರಾವಳಿಗೂ ಕಾಲಿಟ್ಟ ವಂದೇ ಭಾರತ್‌ ರೈಲು  ವೇಳಾಪಟ್ಟಿ ಪ್ರಕಟ

ಮಂಗಳೂರು: ತಿರುವನಂತಪುರಂ-ಕಾಸರಗೋಡು ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್‌ ರೈಲಿನ ಸೇವೆಯನ್ನು ಮಂಗಳೂರು ಸೆಂಟ್ರಲ್‌ ನಿಲ್ದಾಣದವರೆಗೆ ವಿಸ್ತರಿಸಲಾಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಕಾನ್ಫರೆನ್ಸ್‌ ಮೂಲಕ ಮಂಗಳವಾರ ಚಾಲನೆ ನೀಡಿದರು.

Advertisement

ಮಂಗಳೂರು ಸೆಂಟ್ರಲ್‌ನಿಂದ ಬೆಳಗ್ಗೆ ಹೊರಟ ರೈಲು ಕಾಸರಗೋಡನ್ನು ತಲುಪಿ ಮಧ್ಯಾಹ್ನದ ವೇಳೆಗೆ ಮರಳಿದೆ. ಇದರಲ್ಲಿ ರೈಲ್ವೇ ಹೋರಾಟಗಾರರು ಮತ್ತು ವಿದ್ಯಾರ್ಥಿಗಳು ಪ್ರಯಾಣಿಸಿದರು.

ಮಂಗಳೂರು ಸೆಂಟ್ರಲ್‌ ಮತ್ತು ತಿರುವನಂತಪುರಂ ನಡುವೆ ದೈನಂದಿನ ಸೇವೆ ಬುಧವಾರದಿಂದ ಶುರುವಾಗಲಿದೆ. ಬೆಳಗ್ಗೆ 6:25ಕ್ಕೆ ಹೊರಡುವ ರೈಲು ಮಧ್ಯಾಹ್ನ 3:05ಕ್ಕೆ ತಿರುವನಂತಪುರಂ ತಲುಪಲಿದೆ. ಅಲ್ಲಿಂದ ಸಂಜೆ 4:05ಕ್ಕೆ ಹೊರಟು ರಾತ್ರಿ 12:40ಕ್ಕೆ ಮಂಗಳೂರು ತಲುಪಲಿದೆ. ರೈಲು ಕಾಸರಗೋಡು, ಕಣ್ಣೂರು, ಕೋಯಿಕ್ಕೋಡ್‌, ತಿರೂರ್‌, ಶ್ವರ್ನೂರ್‌ ಜಣಕ್ಷನ್‌, ತ್ರಿಶೂರ್‌, ಎರ್ನಾಕುಳಂ ಜಂಕ್ಷನ್‌, ಅಳಪುಝ ಮತ್ತು ಕೊಲ್ಲಂ ನಿಲ್ದಾಣಗಳಲ್ಲಿ ನಿಲ್ಲಲಿದೆ.

Advertisement

Advertisement
Tags :
Advertisement