ಕಪ್ ಎತ್ತಿದ ಆರ್ಸಿಬಿ ಹೆಣ್ಣು ಹುಲಿಗಳು: ವಿಜಯ್ ಮಲ್ಯ ಹರ್ಷ ವ್ಯಕ್ತ
ಬೆಂಗಳೂರು: ಭಾನುವಾರ (ಮಾ.17) ರಾಷ್ಟ್ರ ರಾಜಧಾನಿ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಎರಡನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಸ್ಮೃತಿ ಮಂದಾನ ನೇತೃತ್ವದ ಆರ್ಸಿಬಿ ತಂಡ ಭರ್ಜರಿ ಜಯ ದಾಖಲಿಸುವ ಮೂಲಕ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಆರ್ಸಿಬಿ ವುಮೆನ್ಸ್ ಟೀಮ್ ಗೆಲುವು ದಾಖಲಿಸುತ್ತಿದ್ದಂತೆ ಅಭಿನಂದನೆ ಟ್ವೀಟ್ ಮೂಲಕ ದಿಢೀರ್ ಪ್ರತ್ಯಕ್ಷವಾದ ಉದ್ಯಮಿ ವಿಜಯ್ ಮಲ್ಯ, ವನಿತೆಯರಿಗೆ ಶುಭಹಾರೈಸಿದ್ದಾರೆ.
'WPL ಗೆದ್ದ RCB ಮಹಿಳಾ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಆರ್ಸಿಬಿ ಪುರುಷರ ತಂಡವು ಸಹ ಐಪಿಎಲ್ ಪಟ್ಟ ಗೆದ್ದರೆ ಅದು ಡಬಲ್ ಗೆಲುವಾಗಿರುತ್ತದೆ. ಶುಭವಾಗಲಿ' ಎಂದು ವಿಜಯ್ ಮಲ್ಯ ಟ್ವೀಟ್ ಮಾಡಿ ಅಭಿನಂದನೆ ತಿಳಿಸಿದ್ದಾರೆ. ಈ ಟ್ವೀಟ್ ನೋಡುತ್ತಿದ್ದಂತೆ ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿರುವ ನೆಟ್ಟಿಗರು, ಹಾಸ್ಯಸ್ಪದವಾಗಿ ಕಮೆಂಟ್ ಮಾಡಿದ್ದಾರೆ.
'ಒಬ್ಬರು ಇಂದು ಭಾನುವಾರ ಬ್ಯಾಂಕ್ ರಜೆ' ಎಂದರೆ ಮತ್ತೊಬ್ಬರು, 'ಒಂದು ಡೀಲ್ ಮಾಡಿಕೊಳ್ಳೋಣ, ಆರ್ಸಿಬಿ ಪುರಷರ ತಂಡ ಈ ಬಾರಿಯ ಐಪಿಎಲ್ ಗದ್ದರೆ ನೀವು ಭಾರತಕ್ಕೆ ಬರುತ್ತೀರಾ' ಎಂದು ಕಮೆಂಟ್ ಮಾಡಿದ್ದಾರೆ.