ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ನಟಿ, ನಿರ್ದೇಶಕಿ ಕವಿತಾ ಚೌಧರಿ ಹೃದಯಾಘಾತದಿಂದ ನಿಧನ

ದೂರದರ್ಶನ’ ವಾಹಿನಿಯಲ್ಲಿ ಜನಪ್ರಿಯವಾಗಿದ್ದ ‘ಉಡಾನ್‌’ ಧಾರಾವಾಹಿಯಲ್ಲಿ  ಐಪಿಎಸ್ ಅಧಿಕಾರಿ ಕಲ್ಯಾಣಿ ಸಿಂಗ್ ಎಂಬ ಪಾತ್ರ ಮಾಡಿ ಚಿರಪರಿಚಿತರಾಗಿದ್ದ ನಟಿ ಕವಿತಾ ಚೌಧರಿ ಅವರು ಗುರುವಾರ (ಫೆಬ್ರವರಿ 15) ರಾತ್ರಿ ಹೃದಯಾಘಾತದಿಂದ  ನಿಧನರಾಗಿದ್ದಾರೆ.
07:33 AM Feb 17, 2024 IST | Ashika S

ಪಂಜಾಬ್: ದೂರದರ್ಶನ’ ವಾಹಿನಿಯಲ್ಲಿ ಜನಪ್ರಿಯವಾಗಿದ್ದ ‘ಉಡಾನ್‌’ ಧಾರಾವಾಹಿಯಲ್ಲಿ  ಐಪಿಎಸ್ ಅಧಿಕಾರಿ ಕಲ್ಯಾಣಿ ಸಿಂಗ್ ಎಂಬ ಪಾತ್ರ ಮಾಡಿ ಚಿರಪರಿಚಿತರಾಗಿದ್ದ ನಟಿ ಕವಿತಾ ಚೌಧರಿ ಅವರು ಗುರುವಾರ (ಫೆಬ್ರವರಿ 15) ರಾತ್ರಿ ಹೃದಯಾಘಾತದಿಂದ  ನಿಧನರಾಗಿದ್ದಾರೆ.

Advertisement

ಕವಿತಾ ಚೌಧರಿ ಅವರಿಗೆ 67 ವರ್ಷ ವಯಸ್ಸಾಗಿತ್ತು.

ಆರೋಗ್ಯದಲ್ಲಿ ಏರುಪೇರು ಆದ ಬಳಿಕ ಅಮೃತಸರದ ಆಸ್ಪತ್ರೆಗೆ ಅವರನ್ನು ಕರೆದುಕೊಂಡು ಹೋಗಲಾಗಿತ್ತು. ಕೂಡಲೇ ಚಿಕಿತ್ಸೆ ನೀಡಲಾಯಿತಾದರೂ ಅವರು ಬದುಕಿ ಉಳಿಯಲಿಲ್ಲ.

Advertisement

ಸೀರಿಯಲ್​ ಮಾತ್ರವಲ್ಲದೇ ಜಾಹೀರಾತುಗಳ ಮೂಲಕವೂ ಅವರು ಪ್ರಸಿದ್ಧಿ ಪಡೆದಿದ್ದರು. 80ರ ದಶಕದಲ್ಲಿ ‘ಸರ್ಫ್ ಡಿಟರ್ಜೆಂಟ್’ ಜಾಹೀರಾತುಗಳಲ್ಲಿ ಲಲಿತಾಜಿ ಎಂಬ ಪಾತ್ರ ಮಾಡಿ ಅವರು ಮನೆಮಾತಾಗಿದ್ದರು.

‘ದೂರದರ್ಶನ’ ವಾಹಿನಿಯಲ್ಲಿ ಪ್ರಸಾರವಾದ ‘ಉಡಾನ್​’ ಧಾರಾವಾಹಿಗೆ ಕವಿತಾ ಚೌಧರಿ ಅವರು ನಿರ್ದೇಶನ ಮಾಡಿದ್ದರು. ಮುಖ್ಯ ಪಾತ್ರದಲ್ಲೂ ಅವರೇ ನಟಿಸಿದ್ದರು.

ಶುಕ್ರವಾರ ಬೆಳಿಗ್ಗೆ ಕವಿತಾ ಚೌಧರಿ ಅವರ ಅಂತ್ಯಕ್ರಿಯೆ ನಡೆಸಲಾಯಿತು’ ಎಂದು ಅವರ ಸೋದರಳಿಯ ಅಜಯ್ ಸಾಯಲ್​ ಹೇಳಿದ್ದಾರೆ.

Advertisement
Tags :
‘ಉಡಾನ್‌’LatestNewsNewsKannadaಐಪಿಎಸ್ ಅಧಿಕಾರಿನಿಧನಹೃದಯಾಘಾತ
Advertisement
Next Article