For the best experience, open
https://m.newskannada.com
on your mobile browser.
Advertisement

ಬಿಜೆಪಿಯೊಂದಿಗಿನ ಮನಸ್ತಾಪ ಮುಕ್ತಾಯ; ಪಕ್ಷಕ್ಕೆ ಮರಳಲಿರುವ ಪುತ್ತಿಲ

ಬಿಜೆಪಿಯೊಂದಿಗಿನ ಮನಸ್ತಾಪ ಅಂತ್ಯವಾಗಿದ್ದು, ಪುತ್ತಿಲ ಪರಿವಾರದ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಮತ್ತೆ ಬಿಜೆಪಿಗೆ ಮರಳಲಿದ್ದಾರೆಂದು ತಿಳಿದುಬಂದಿದೆ.
07:42 PM Feb 08, 2024 IST | Maithri S
ಬಿಜೆಪಿಯೊಂದಿಗಿನ ಮನಸ್ತಾಪ ಮುಕ್ತಾಯ  ಪಕ್ಷಕ್ಕೆ ಮರಳಲಿರುವ ಪುತ್ತಿಲ

ಪುತ್ತೂರು: ಬಿಜೆಪಿಯೊಂದಿಗಿನ ಮನಸ್ತಾಪ ಅಂತ್ಯವಾಗಿದ್ದು, ಪುತ್ತಿಲ ಪರಿವಾರದ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಮತ್ತೆ ಬಿಜೆಪಿಗೆ ಮರಳಲಿದ್ದಾರೆಂದು ತಿಳಿದುಬಂದಿದೆ.

Advertisement

ಬಿಜೆಪಿಯೊಂದಿಗೆ ಪುತ್ತಿಲ ಪರಿವಾರದ ಮಾತುಕತೆಯ ನಂತರ ಅವರು ಶೀಘ್ರವೇ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಾರೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಘೋಷಣೆ ಬಾಕಿಯಿದ್ದು, ಪಕ್ಷ ಸೇರ್ಪಡೆಗೆ ತಾಲೂಕು ಮತ್ತು ಜಿಲ್ಲೆಯ ಬಿಜೆಪಿ ಹಾಗು ಪುತ್ತಿಲ ಪರಿವಾರದ ಮುಖಂಡರು ಭಾಗವಹಿಸಲಿದ್ದಾರೆ.

ಹಿಂದೆ ಆಗಿರುವುದೆಲ್ಲ ಇತಿಹಾಸ, ಇನ್ನು ಶುರುವಾಗುವುದು ಹೊಸ ಅಧ್ಯಾಯ ಎಂದು ಪುತ್ತಿಲ ಪರಿವಾರ ಪ್ರತಿಕ್ರಿಯಿಸಿದ್ದು, ಅರುಣ್‌ಗೆ ಯಾವ ಹುದ್ದೆ ಎನ್ನುವ ಬಗ್ಗೆ ಇನ್ನಷ್ಟೇ ಸ್ಪಷ್ಟವಾಗಬೇಕಿದೆ.

Advertisement

Advertisement
Tags :
Advertisement