ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬ್ರಹ್ಮಾವರ: ಯುವಕನ ಶೂಟೌಟ್ ಪ್ರಕರಣ-ಪಶ್ಚಿಮ ವಲಯ ಐಜಿಪಿ ಸ್ಥಳಕ್ಕೆ ಭೇಟಿ

ಬ್ರಹ್ಮಾವರ ತಾಲೂಕಿನ ಹನೆಹಳ್ಳಿಯಲ್ಲಿ ನಡೆದ ದಲಿತ ಯುವಕನ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ. ಸ್ಥಳಕ್ಕೆ ಪಶ್ಚಿಮ ವಲಯ ಐಜಿಪಿ ಡಾ.ಬೋರಲಿಂಗಯ್ಯ ಆಗಮಿಸಿ ಪ್ರಕರಣದ ಮಾಹಿತಿ, ಬೆಳವಣಿಗೆಗಳನ್ನು ಪಡೆದುಕೊಂಡರು.
05:53 PM Mar 07, 2024 IST | Nisarga K
ಬ್ರಹ್ಮಾವರ: ಯುವಕನ ಶೂಟೌಟ್ ಪ್ರಕರಣ-ಪಶ್ಚಿಮ ವಲಯ ಐಜಿಪಿ ಸ್ಥಳಕ್ಕೆ ಭೇಟಿ

ಉಡುಪಿ: ಬ್ರಹ್ಮಾವರ ತಾಲೂಕಿನ ಹನೆಹಳ್ಳಿಯಲ್ಲಿ ನಡೆದ ದಲಿತ ಯುವಕನ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ.
ಸ್ಥಳಕ್ಕೆ ಪಶ್ಚಿಮ ವಲಯ ಐಜಿಪಿ ಡಾ.ಬೋರಲಿಂಗಯ್ಯ ಆಗಮಿಸಿ ಪ್ರಕರಣದ ಮಾಹಿತಿ, ಬೆಳವಣಿಗೆಗಳನ್ನು ಪಡೆದುಕೊಂಡರು.

Advertisement

ಹತ್ಯೆಗೈದ ದುಷ್ಕರ್ಮಿಗಳ ಪತ್ತೆಗೆ ಮೂರು ತಂಡ ರಚನೆಯಾಗಿದ್ದು, ತನಿಖೆಯ ಪ್ರಗತಿ ಬಗ್ಗೆ ಐಜಿಪಿ ಬೋರಲಿಂಗಯ್ಯ ಮಾಹಿತಿ ಕಲೆ ಹಾಕಿದರು. ಘಟನಾ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲಿಸಿದರು. ಟೆಕ್ನಿಕಲ್ ಎವಿಡೆನ್ಸ್ ಗಳ ಹಿಂದೆ ಬಿದ್ದಿರುವ ಖಾಕಿ ಪಡೆಗೆ, ಸುಪಾರಿ ಕಿಲ್ಲರ್ ಈ ಹತ್ಯೆ ಮಾಡಿರಬಹುದು ಎಂಬ ಬಲವಾದ ಶಂಕೆಯಿದೆ.

ಮೃತ ಕೃಷ್ಣ ಅವರ ಕುಟುಂಬಸ್ಥರು, ಗೆಳೆಯರಿಂದ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ. ಪ್ರಕರಣ ಸಂಬಂಧ ಈವರೆಗೆ ಯಾವುದೇ ಸಂಶಯಾಸ್ಪದ ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡಿಲ್ಲ. ಪ್ರಕರಣ ಸಂಬಂಧ ಕೆಲವು ಸಲಹೆಗಳನ್ನು ತನಿಖಾ ತಂಡಗಳಿಗೆ ಐಜಿಪಿ ಬೋರಲಿಂಗಯ್ಯ ನೀಡಿದ್ದಾರೆ.

Advertisement

Advertisement
Tags :
BRAMHAVARACASEcrimeIGPLatestNewsNewsKannadaSHOOTOUTVISIT
Advertisement
Next Article