ಸ್ಕೂಟರ್ ಗೆ ಮಿನಿ ಬಸ್ ಡಿಕ್ಕಿ: ಕೇಬಲ್ ಆಪರೇಟರ್ ಮೃತ್ಯು
ಮಿನಿ ಬಸೊಂದು ಸ್ಕೂಟರಿಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಕೇಬಲ್ ಆಪರೇಟರ್ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಕುಂದಾಪುರ ತಲ್ಲೂರಿನಲ್ಲಿ ನಡೆದಿದೆ.
01:12 PM Apr 07, 2024 IST
|
Ashika S
ಕುಂದಾಪುರ: ಮಿನಿ ಬಸೊಂದು ಸ್ಕೂಟರಿಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಕೇಬಲ್ ಆಪರೇಟರ್ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಕುಂದಾಪುರ ತಲ್ಲೂರಿನಲ್ಲಿ ನಡೆದಿದೆ.
Advertisement
ತಲ್ಲೂರು ಗರಡಿ ಸಮೀಪದ ನಿವಾಸಿ ಶೇಖರ್ ಪೂಜಾರಿ (52) ಮೃತ ದುರ್ದೈವಿ.
ಕಳೆದ ಭಾನುವಾರ ಮಧ್ಯಾಹ್ನ ತಲ್ಲೂರು ಸರ್ಕಲ್ ಬಳಿ ಶೇಖರ್ ಪೂಜಾರಿ ಅವರ ಸ್ಕೂಟರಿಗೆ ಮಿನಿ ಬಸ್ಸೊಂದು ಢಿಕ್ಕಿ ಹೊಡೆದಿತ್ತು ಪರಿಣಾಮ ಶೇಖರ್ ಪೂಜಾರಿ ಅವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
Advertisement
Advertisement
Next Article