For the best experience, open
https://m.newskannada.com
on your mobile browser.
Advertisement

ಮೀ ಟೂ ಆರೋಪಿ ಜೊತೆ ವೇದಿಕೆ ಹಂಚಿಕೊಂಡ ಖ್ಯಾತ ನಟ; ಗಾಯಕಿ ಅಸಮಾಧಾನ

ಗಾಯಕಿ ಚಿನ್ಮಯಿ ಶ್ರೀಪಾದ್ ಅವರು ಹಲವು ವಿಚಾರಗಳ ಬಗ್ಗೆ ಧ್ವನಿ ಎತ್ತುತ್ತಾರೆ. ಈಗ ಅವರು ಕಮಲ್ ಹಾಸನ್ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಮೀ ಟೂ ಆರೋಪಿ ವೈರಮುತ್ತು ಜೊತೆ ಕಮಲ್ ಹಾಸನ್ ವೇದಿಕೆ ಹಂಚಿಕೊಂಡಿದ್ದಾರೆ. ಇದನ್ನು ಚಿನ್ಮಯಿ ಶ್ರೀಪಾದ್ ಅವರು ಖಂಡಿಸಿದ್ದಾರೆ.
02:31 PM Jan 02, 2024 IST | Ashitha S
ಮೀ ಟೂ ಆರೋಪಿ ಜೊತೆ ವೇದಿಕೆ ಹಂಚಿಕೊಂಡ ಖ್ಯಾತ ನಟ  ಗಾಯಕಿ ಅಸಮಾಧಾನ

ಚೆನ್ನೈ: ಗಾಯಕಿ ಚಿನ್ಮಯಿ ಶ್ರೀಪಾದ್ ಅವರು ಹಲವು ವಿಚಾರಗಳ ಬಗ್ಗೆ ಧ್ವನಿ ಎತ್ತುತ್ತಾರೆ. ಈಗ ಅವರು ಕಮಲ್ ಹಾಸನ್ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಮೀ ಟೂ ಆರೋಪಿ ವೈರಮುತ್ತು ಜೊತೆ ಕಮಲ್ ಹಾಸನ್ ವೇದಿಕೆ ಹಂಚಿಕೊಂಡಿದ್ದಾರೆ. ಇದನ್ನು ಚಿನ್ಮಯಿ ಶ್ರೀಪಾದ್ ಅವರು ಖಂಡಿಸಿದ್ದಾರೆ.

Advertisement

ಅವರು ಮಾಡಿರುವ ಟ್ವೀಟ್ ಸಾಕಷ್ಟು ವೈರಲ್ ಆಗುತ್ತಿದೆ. ಈ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆದಿವೆ.

ಗೀತರಚನಕಾರ ವೈರಮುತ್ತು ಅವರು ಬರೆದ ‘ಮಹಾ ಕಿವಿತೈ’ ಪುಸ್ತಕ ಬಿಡುಗಡೆ ಕಾರ್ಯಕ್ರಮ ಇತ್ತಿಚೆಗೆ ನಡೆದಿದೆ. ಈ ಕಾರ್ಯಕ್ರಮಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ, ಕಮಲ್ ಹಾಸನ್ ಮೊದಲಾದವರು ಭಾಗಿ ಆಗಿದ್ದರು. ಇದನ್ನು ಚಿನ್ಮಯಿ ಅವರು ಖಂಡಿಸಿದ್ದಾರೆ. ಮಹಿಳೆಯರಿಗೆ ಕಿರುಕುಳ ನೀಡಿದವರ ಬೆಂಬಲಕ್ಕೆ ದೊಡ್ಡ ದೊಡ್ಡ ವ್ಯಕ್ತಿಗಳು ಇದ್ದಾರೆ ಎಂಬರ್ಥದಲ್ಲಿ ಮಾತನಾಡಿದ್ದಾರೆ.

Advertisement

ಪುಸ್ತಕ ಬಿಡುಗಡೆ ಕಾರ್ಯಕ್ರಮದ ಕುರಿತು ಸನ್ ನ್ಯೂಸ್ ಟ್ವೀಟ್ ಮಾಡಿತ್ತು. ಇದನ್ನು ಚಿನ್ಮಯಿ ಅವರು ರೀಟ್ವೀಟ್ ಮಾಡಿಕೊಂಡಿದ್ದಾರೆ. ‘ನನಗೆ ಕಿರುಕುಳ ನೀಡಿದ ವ್ಯಕ್ತಿಗೆ ತಮಿಳುನಾಡಿನ ಕೆಲವು ಶಕ್ತಿಶಾಲಿ ವ್ಯಕ್ತಿಗಳು ಆಧಾರವಾಗಿದ್ದಾರೆ’ ಎಂದು ಅವರು ಟೀಕಿಸಿದ್ದಾರೆ.

2018ರಲ್ಲಿ ಗೀತರಚನಕಾರ ವೈರಮುತ್ತು ವಿರುದ್ಧ ಚಿನ್ಮಯಿ ಅವರು ಲೈಂಗಿಕ ಕಿರಕುಳ ಆರೋಪ ಹೊರಿಸಿದ್ದರು. ಆ ಬಳಿಕ ಅವರ ಆರೋಪದಲ್ಲಿ ಹುರುಳಿಲ್ಲ ಎಂದು ಅವರನ್ನು ಐದು ವರ್ಷಗಳ ಕಾಲ ಇಂಡಸ್ಟ್ರಿಯಿಂದ ಬ್ಯಾನ್ ಮಾಡಲಾಯಿತು.

Advertisement
Tags :
Advertisement