For the best experience, open
https://m.newskannada.com
on your mobile browser.
Advertisement

ಧಾರ್ಮಿಕ ಭಾವನೆಗಳಿಗೆ  ಧಕ್ಕೆ ತಂದ ಆರೋಪ: ರಣಬೀರ್‌ ಕಪೂರ್‌ ವಿರುದ್ಧ ದೂರು ದಾಖಲು

 ನಟ ರಣಬೀರ್‌ ಕಪೂರ್‌ ನಟಿಸಿರುವ ಅನಿಮಲ್‌ ಚಿತ್ರವು ಭರ್ಜರಿ ಹಿಟ್‌ ಆಗಿದ್ದು, ಅದೇ ಸಂಭ್ರಮದಲ್ಲಿದ್ದ ರಣಬೀರ್‌ ಕಪೂರ್‌ಗೆ  ಶಾಕ್ ಸಿಕ್ಕಿದೆ.
09:30 AM Dec 28, 2023 IST | Ashika S
ಧಾರ್ಮಿಕ ಭಾವನೆಗಳಿಗೆ  ಧಕ್ಕೆ ತಂದ ಆರೋಪ  ರಣಬೀರ್‌ ಕಪೂರ್‌ ವಿರುದ್ಧ ದೂರು ದಾಖಲು

ಮುಂಬೈ:  ನಟ ರಣಬೀರ್‌ ಕಪೂರ್‌ ನಟಿಸಿರುವ ಅನಿಮಲ್‌ ಚಿತ್ರವು ಭರ್ಜರಿ ಹಿಟ್‌ ಆಗಿದ್ದು, ಅದೇ ಸಂಭ್ರಮದಲ್ಲಿದ್ದ ರಣಬೀರ್‌ ಕಪೂರ್‌ಗೆ  ಶಾಕ್ ಸಿಕ್ಕಿದೆ.

Advertisement

ಧಾರ್ಮಿಕ ಭಾವನೆಗಳಿಗೆ  ಧಕ್ಕೆ ತಂದ ಆರೋಪದ ಹಿನ್ನೆಲೆಯಲ್ಲಿ ನಟ ರಣಬೀರ್‌ ಕಪೂರ್‌ ಹಾಗೂ ಅವರ ಕುಟುಂಬಸ್ಥರ ವಿರುದ್ಧ ಮುಂಬೈನ ಘಟ್ಕೋಪರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಕ್ರಿಸ್‌ಮಸ್‌ ಹಿನ್ನೆಲೆಯಲ್ಲಿ ರಣಬೀರ್‌ ಕಪೂರ್‌ ಹಾಗೂ ಅವರ ಕುಟುಂಬಸ್ಥರು ಕೇಕ್‌ ಮೇಲೆ ಮದ್ಯ ಸುರಿದು, ಬೆಂಕಿ ಹಚ್ಚಿದ ಬಳಿಕ, ಜೈ ಮಾತಾ ದಿ ಎಂದು ಘೋಷಣೆ ಕೂಗಿರುವುದು, ಸಂಭ್ರಮಾಚರಣೆ ಹೆಸರಿನಲ್ಲಿ ಹಿಂದೂಗಳ ನಂಬಿಕೆಗೆ ಧಕ್ಕೆ ತಂದಿದ್ದಾರೆ ಎಂದು ಸಂಜಯ್‌ ತಿವಾರಿ ಎಂಬುವರು ದೂರು ದಾಖಲಿಸಿದ್ದಾರೆ.

Advertisement

ಸಂಭ್ರಮಾಚರಣೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು,ಇದೇ ಈಗ ವಿವಾದಕ್ಕೆ ಕಾರಣವಾಗಿದೆ. ಆದಾಗ್ಯೂ, ಕೇಸ್‌ ದಾಖಲಾಗಿರುವ ಕುರಿತು ನಟ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

 

View this post on Instagram

 

A post shared by Filmfare (@filmfare)

Advertisement
Tags :
Advertisement