ಮುಸ್ಲೀಂ ಯುವಕರಿಂದ 'ದಲಿತ ಯುವಕʼನ ಹತ್ಯೆ !
ಹುಬ್ಬಳ್ಳಿಯಲ್ಲಿ ನಡೆದ ನೇಹಾ ಕೊಲೆ ಪ್ರಕರಣದ ಕಹಿ ನೆನಪು ಇನ್ನೂ ಮಾಸಿಲ್ಲ. ಅಷ್ಟರಲ್ಲಾಗಲೇ, ಯಾದಗಿರಿಯಲ್ಲಿ ಅಂತರ್ ಧರ್ಮೀಯ ಕೊಲೆ ನಡೆದಿದೆ. ದಲಿತ ಯುವಕನೊಬ್ಬನ ಮರ್ಮಾಂಗಕ್ಕೆ ಮುಸ್ಲೀಂ ಯುವಕನೊಬ್ಬ ಒದ್ದ ಪರಿಣಾಮ, ಸ್ಥಳದಲ್ಲೇ ದಲಿತ ಯುವಕ ಸಾವನ್ನಪ್ಪಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.
03:49 PM Apr 22, 2024 IST | Ashitha S
ಯಾದಗಿರಿ: ಹುಬ್ಬಳ್ಳಿಯಲ್ಲಿ ನಡೆದ ನೇಹಾ ಕೊಲೆ ಪ್ರಕರಣದ ಕಹಿ ನೆನಪು ಇನ್ನೂ ಮಾಸಿಲ್ಲ. ಅಷ್ಟರಲ್ಲಾಗಲೇ, ಯಾದಗಿರಿಯಲ್ಲಿ ಅಂತರ್ ಧರ್ಮೀಯ ಕೊಲೆ ನಡೆದಿದೆ. ದಲಿತ ಯುವಕನೊಬ್ಬನ ಮರ್ಮಾಂಗಕ್ಕೆ ಮುಸ್ಲೀಂ ಯುವಕನೊಬ್ಬ ಒದ್ದ ಪರಿಣಾಮ, ಸ್ಥಳದಲ್ಲೇ ದಲಿತ ಯುವಕ ಸಾವನ್ನಪ್ಪಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.
Advertisement
ಯಾದಗಿರಿ ನಗರದ ಶಗಾಪುರಪೇಟೆ ಬಡಾವಣೆಯಲ್ಲಿದ್ದಂತ ರೊಟ್ಟಿ ಕೇಂದ್ರಕ್ಕೆ ತಡರಾತ್ರಿ ದಲಿತ ಯುವಕ ರಾಕೇಶ್ ಎಂಬಾತ ರೊಟ್ಟಿ ತೆಗೆದುಕೊಂಡು ಬರೋದಕ್ಕೆ ತೆರಳಿದ್ದಾನೆ. ರೊಟ್ಟಿ ಖರೀದಿಯ ವೇಳೆಯಲ್ಲಿ ವಾಗ್ವಾದ ನಡೆದು, ಮುಸ್ಲೀಂ ಯುವಕ ಫಯಾಜ್ ಹಾಗೂ ರಾಕೇಶ್ ನಡುವೆ ಗಲಾಟೆಯಾಗಿದೆ. ರಾಕೇಶ್ ಮನೆಗೆ ಮರಳಿದ ನಂತರ ಮತ್ತೆ ಜಗಳವಾಗಿದ್ದು, ಈ ವೇಳೆ ರಾಕೇಶ್ನ ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.
Advertisement
Advertisement