For the best experience, open
https://m.newskannada.com
on your mobile browser.
Advertisement

ಡ್ರಾಮಾ ಜೂನಿಯರ್ಸ್‌ ಸೀಸನ್‌ 5; ಮಂಗಳೂರಿನ ರಿಷಿಕಾ ಕುಂದೇಶ್ವರ, ವಿಷ್ಣುಗೆ ವಿನ್ನರ್‌ ಪಟ್ಟ

ಕಳೆದ 21 ವಾರಗಳಿಂದ ಜೀ ಕನ್ನಡದಲ್ಲಿ ಡ್ರಾಮಾ ಜೂನಿಯರ್ಸ್‌ ಸೀಸನ್‌ 5 ಪ್ರಸಾರ ಕಾಣುತ್ತ ಬಂದಿದೆ. ಈ ಅವಧಿಯಲ್ಲಿ ಸಾಕಷ್ಟು ಪುಟಾಣಿಗಳು ತಮ್ಮ ಪ್ರತಿಭೆ ಮೂಲಕವೇ ನಾಡಿನ ಮನೆ ಮಾತಾಗಿದ್ದಾರೆ.
09:35 AM Apr 22, 2024 IST | Ashitha S
ಡ್ರಾಮಾ ಜೂನಿಯರ್ಸ್‌ ಸೀಸನ್‌ 5  ಮಂಗಳೂರಿನ ರಿಷಿಕಾ ಕುಂದೇಶ್ವರ  ವಿಷ್ಣುಗೆ ವಿನ್ನರ್‌ ಪಟ್ಟ

ಬೆಂಗಳೂರು: ಕಳೆದ 21 ವಾರಗಳಿಂದ ಜೀ ಕನ್ನಡದಲ್ಲಿ ಡ್ರಾಮಾ ಜೂನಿಯರ್ಸ್‌ ಸೀಸನ್‌ 5 ಪ್ರಸಾರ ಕಾಣುತ್ತ ಬಂದಿದೆ. ಈ ಅವಧಿಯಲ್ಲಿ ಸಾಕಷ್ಟು ಪುಟಾಣಿಗಳು ತಮ್ಮ ಪ್ರತಿಭೆ ಮೂಲಕವೇ ನಾಡಿನ ಮನೆ ಮಾತಾಗಿದ್ದಾರೆ.

Advertisement

ಎಲ್ಲರ ಗಮನ ಸೆಳೆದಿದ್ದಾರೆ. ಇದೀಗ ಇದೇ ಶೋಗೆ ತೆರೆ ಬಿದ್ದಿದೆ. ಭಾನುವಾರ ಸೀಸನ್‌ 5ರ ವಿಜೇತರು ಯಾರು ಎಂಬುದನ್ನು ಘೋಷಿಸುವ ಮೂಲಕ ಕಾರ್ಯಕ್ರಮ ಮುಕ್ತಾಯ ಕಂಡಿದೆ. ವಿಶೇಷ ಏನೆಂದರೆ, ಈ ಸಲದ ವಿಜೇತರು ಒಬ್ಬರಲ್ಲ, ಇಬ್ಬರು.

ಹೌದು. . 21 ವಾರ ಕರುನಾಡನ್ನು ಮನರಂಜಿಸಿದ 14 ಮಕ್ಕಳ ಪೈಕಿ ಯಾರು ವಿಜೇತರು ಎಂಬ ಕೌತುಕಕ್ಕೆ ಭಾನುವಾರ ತೆರೆಬಿದ್ದಿದೆ. ಈ ಬಾರಿ ಎಲ್ಲ14 ಮಂದಿ ಪುಟಾಣಿಗಳು ಫಿನಾಲೆ ಸುತ್ತಿನಲ್ಲಿದ್ದರು. ಆ ಪೈಕಿ ಫಿನಾಲೆ ರೌಂಡ್‌ನಲ್ಲಿ ಭದ್ರಾವತಿಯ ಇಂಚರ, ಶಿವಮೊಗ್ಗದ ಮಹಾಲಕ್ಷ್ಮೀ, ಮಂಗಳೂರಿನ ರಿಶಿಕಾ, ಕುಣಿಗಲ್‌ನ ವಿಷ್ಣು ಆಯ್ಕೆಯಾದರು.

Advertisement

ಈ ನಾಲ್ವರಲ್ಲಿ ಇಂಚರ ಎರಡನೇ ರನ್ನರ್‌ ಅಪ್ ಆದರು. ಅದಾದ ಬಳಿಕ ರಿಷಿಕಾ ಕುಂದೇಶ್ವರ ಮತ್ತು ವಿಷ್ಣು ಅವರನ್ನು ಡ್ರಾಮಾ ಜೂನಿಯರ್ಸ್‌ ಸೀಸನ್‌ 5ರ ಜಂಟಿ ವಿಜೇತರು ಎಂದು ರವಿಚಂದ್ರನ್‌ ಘೋಷಿಸಿದರು. ಇತ್ತ ಶಿವಮೊಗ್ಗದ ಮಹಾಲಕ್ಷ್ಮೀ ಮೊದಲ ರನ್ನರ್‌ ಅಪ್ ಆಗಿ ಹೊರ ಹೊಮ್ಮಿದರು. ಇದಷ್ಟೇ ಅಲ್ಲದೆ, ಡ್ರಾಮಾ ಜೂನಿಯರ್ಸ್ ಸೀಸನ್ 5ರ ಎಂಟರ್‌ಟ್ರೇನರ್‌ ಆಗಿ ಆಲ್‌ರೌಂಡರ್ ಆರ್ಯ ಸ್ವರೂಪ್‌ ಹೊರಹೊಮ್ಮಿದರು.

Advertisement
Tags :
Advertisement